ಹಸೆಮಣೆ ಏರಬೇಕಿದ್ದ ಯುವಕ ಕೋವಿಡ್ ಸೋಂಕಿಗೆ ಬಲಿ | ಜನತಾ ನ್ಯೂಸ್
ಕಾರವಾರ : ಇಂದು ಹಸೆಮಣೆ ಏರಬೇಕಿದ್ದ ಯುವಕ ಕೊರೊನಾ ಬಲಿ ಪಡೆದುಕೊಂಡಿದೆ.
ಕಾರವಾರದ ನಂದನಗದ್ದಾ ನಿವಾಸಿ ರೋಶನ್ ಪಡುವಳಕರ್ ಸಾವನ್ನಪ್ಪಿದ ಯುವಕ. ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ರೋಶನ್ ಕೆಲ ದಿನಗಳ ಹಿಂದೆ ಕಾರವಾರಕ್ಕೆ ಬಂದಿದ್ದರು.
ಒಂದು ವಾರದ ಹಿಂದೆ ಅನಾರೋಗ್ಯ ತುತ್ತಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಕುಟುಂಸ್ಥರು ಮದುವೆಯನ್ನು ಮುಂದೂಡಿದ್ದರು.
ಪುಣೆಯಿಂದ ಬಂದಾಗ ಅನಾರೋಗ್ಯಕ್ಕೆ ಒಳಗಾದ ರೋಷನ್ ಸ್ಥಳೀಯ ಖಾಸಗಿ ಕ್ಲಿನಿಕ್ ನಲ್ಲಿ ಪರೀಕ್ಷಿಸಿದಾಗ ಟೈಫಾಯ್ಡ್ ಇರಬಹುದು ಎಂದು ಹೇಳಿದ್ದು, ಮನೆಯಲ್ಲೇ ವಿಶ್ರಾಂತಿ ಪಡೆದುಕೊಂಡಿದ್ದರು ಎನ್ನಲಾಗಿದೆ.
ಎರಡು ದಿನಗಳಿಂದ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಸೋಮವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ರೋಷನದ ಕೊನೆಯುಸಿರು ಎಳೆದಿದ್ದಾರೆ. ಬಳಿಕ ಕೋವಿಡ್ ಪರೀಕ್ಷೆ ಮಾಡಿದಾಗ ಸೋಂಕು ಇರುವುದಯ ದೃಢವಾಗಿದೆ.