ಬೆಡ್ ಬ್ಲಾಕಿಂಗ್ ಬಯಲಿಗೆಳೆದಕ್ಕೆ, ಬೇರೆ ನೆಪದಲ್ಲಿ, ಸಂಸದ ತೇಜಸ್ವಿ ಸೂರ್ಯ ಮೇಲೆ ಆಕ್ರಮಣ ನಡೆಸಲಾಗುತ್ತಿದೆ - ಸಂಸದ ಸಿಂಹ | ಜನತಾ ನ್ಯೂಸ್
ಮೈಸೂರು : ಬೆಂಗಳೂರಿನಲ್ಲಿ ಕಾರ್ಪೊರೇಟರ್ ಗಳಿಂದ ಹಿಡಿದು ಕೇಂದ್ರ ಸಚಿವರು, ಎಂಪಿ, ಎಂಎಲ್ಎಗಳು ಸೇರಿ ಸಾವಿರಾರು ಜನರಿದ್ದಾರೆ ಕರೋನಾ ಸಮಯದಲ್ಲಿ ಎಲ್ಲರೂ ತಮ್ಮತಮ್ಮ ಯೋಗದಾನ ನೀಡುವಂತದ್ದು ಜನರನ್ನು ಕರೋನಾದಿಂದ ಪಾರುಮಾಡುವಲ್ಲಿ ಸಾಂಗಿಕ ಪ್ರಯತ್ನ ಮಾಡುವಂತದ್ದು ಈ ಕ್ಷಣದ ಅನಿವಾರ್ಯ ಹಾಗೂ ತುರ್ತು ಅಗತ್ಯವಾಗಿದೆ.
ಈ ಮಧ್ಯದಲ್ಲಿ ಯುವ ಸಂಸದ ತೇಜಸ್ವಿ ಸೂರ್ಯ ಅವರು, ಯಾಕೆ ಬೆಂಗಳೂರಿನಲ್ಲಿ ಇಷ್ಟೆಲ್ಲಾ ಪ್ರಮಾಣದಲ್ಲಿ ಆಸ್ಪತ್ರೆಗಳಿದ್ದರೂ ಬೆಟ್ಟಗಳ ಕೊರತೆ ಆಗುತ್ತಿದೆಯಲ್ಲ? ಎಂದು ಅದರ ಹಿಂದೆ ಹೋಗಿ ಬೆಡ್ ಬ್ಲಾಕಿಂಗ್ ಎಂಬುವ ಒಂದು ಧಂದೆ, ಈ ಹಿಂದೆ ಮೆಡಿಕಲ್ ಸೀಟ್ ಬ್ಲಾಕಿಂಗ್ ಹಾಗೆ ಬೆಡ್ ಬ್ಲಾಕಿಂಗ್ ಕೂಡ, ಇದು ಮಾನವತೆಯನ್ನು ಮರೆತು ಇತರದ ಒಂದು ಪ್ರಯತ್ನ ನಡೆಯುತ್ತಿದೆ, ಎಂದು ಗೊತ್ತು ಮಾಡಿ ಅದನ್ನು ಬಯಲಿಗೆ ಎಳೆದ್ದಕ್ಕಾಗಿ, ಇಂದು ಸಾವಿರಾರು ಬೆಡ್ ಗಳು ಸೋಂಕಿತರಿಗೆ ಸಿಗುತ್ತಿದೆ. ಇದಕ್ಕೆ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ಈ ಒಂದು ಧಂದೆ ಯನ್ನು ಹೊರಹಾಕಿದ ನಂತರವೂ ಕೂಡ, ಯಾವುದೊ ಪಟ್ಟಿಯನ್ನು ಓದಿದಾಗ ಒಂದೇ ಕೋಮಿಗೆ ಸೇರಿದವರು ಹೆಸರಿತ್ತು, ಅನ್ನುವ ಕಾರಣವನ್ನು ನೆಪವಾಗಿಟ್ಟುಕೊಂಡು, ಅವರು ಮಾಡಿದ ಒಳ್ಳೆ ಕೆಲಸವನ್ನು ಮರೆತು ತೇಜಸ್ವಿ ಸೂರ್ಯ ಅವರ ಮೇಲೆ ಅವ್ಯಾಹತವಾಗಿ ಈ ರೀತಿ ಆಕ್ರಮಣ ಮಾಡುತ್ತಿರುವುದು ನಿಜಕ್ಕೂ ಕೂಡ ಒಳ್ಳೆಯ ಬೆಳವಣಿಗೆ ಅಲ್ಲ. ಒಂದು ಕೋಮಿನವರ ಪಟ್ಟಿ ಕೈಗೆ ಸಿಕ್ಕಿದ್ದು ಅನ್ನುವ ಕಾರಣಕ್ಕೆ ಅವರನ್ನು ಓದಿರಬಹುದು. ಆದರೆ ಅದರಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ, ಅದರಲ್ಲಿ ಬಂಧನಕ್ಕೆ ಒಳಗಾದವರಲ್ಲಿ ಎಲ್ಲ ಕೋಮಿನವರು ಇದ್ದಾರೆನಾನು
ಯುವ ಸಂಸದರನ್ನು ಈ ಹಂತದಲ್ಲಿ ಕಟ್ಟಿಹಾಕಬೇಕು ಅಥವಾ ಮಟ್ಟಹಾಕಬೇಕು ಎನ್ನುವ ಮನಸ್ಥಿತಿಯಲ್ಲಿ ಈ ರೀತಿ ಆಕ್ರಮಣ ಮಾಡುತ್ತಿರುವುದು, ನಿಜಕ್ಕೂ ನಾವ್ಯಾರೂ ಸಹಿಸುವಂತಹ ವಿಷಯವಲ್ಲ. ನನ್ನ ಎಲ್ಲಾ ರಾಜಕೀಯ ನಾಯಕರಿಗೆ ಕೇಳಿಕೊಳ್ಳುತ್ತೇನೆ. ನೀವು ತೇಜಸ್ವಿ ಸೂರ್ಯ ಅವರ ಮೇಲೆ ಆಕ್ರಮಣ ಮಾಡುವ ನಿಮ್ಮ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ನಿಮ್ಮ ಕ್ಷೇತ್ರದ ಬೆಟ್ಟಗಳ ಬಗ್ಗೆ ಆಕ್ಸಿಡೆಂಟ್ ಬಗ್ಗೆ ಔಷಧಿಗಳ ಬಗ್ಗೆ ಗಮನ ವಹಿಸಬೇಕು, ಎಂದು ಹೇಳಿದ್ದಾರೆ