ಮಾನಗೆಟ್ಟ ಬಿಜೆಪಿಗರೇ ನಿಮ್ಮವರೇ ನಿಮ್ಮ ಮುಖಕ್ಕೆ ಉಗಿಯುತ್ತಿದ್ದಾರಲ್ಲ ಕೊಂಚವೂ ನಾಚಿಕೆ ಎನಿಸುತ್ತಿಲ್ಲವೇ? | ಜನತಾ ನ್ಯೂಸ್
ಬೆಂಗಳೂರು : ಮಾನಗೆಟ್ಟ ಬಿಜೆಪಿ ನಾಯಕರೇ ಕೊರೋನಾವನ್ನು ನಿಯಂತ್ರಿಸುವಲ್ಲಿ ನೀವು ಎಡವಿದ್ದೀರಿ. ಜನರಿಗೆ ಸಾವಿನ ಭಾಗ್ಯ ನೀಡುತ್ತಿದ್ದೀರಿ ಹೀಗಾಗಿ ನಿಮ್ಮವರೇ ನಿಮ್ಮ ಮುಖಕ್ಕೆ ಉಗಿಯುತ್ತಿದ್ದಾರೆ. ನಿಮಗೆ ಕೊಂಚವಾದರೂ ನಾಚಿಕೆಯಾಗುತ್ತಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದೆ.
ಅಸಲಿಗೆ ಕರ್ನಾಟಕದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದೀಗ ಮಹಾರಾಷ್ಟ್ರವನ್ನೂ ಹಿಂದಿಕ್ಕಿ ಕರ್ನಾಟಕ ಸೋಂಕು ಪೀಡಿತರ ರಾಜ್ಯಗಳ ಪಟ್ಟಿಯಲ್ಲಿ ಮೇಲಕ್ಕೇರಿದೆ. ಹೀಗಾಗಿ ಸ್ವತಃ ಬಿಜೆಪಿ ಮಾಜಿ ಸಚಿವರಾದ ಸಿ.ಟಿ. ರವಿ, ಸರ್ಕಾರ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಲ್ಲಿ ಎಡವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಮಾನಗೆಟ್ಟ ಬಿಜೆಪಿ ನಾಯಕರೇ ನಿಮ್ಮವರೇ ನಿಮಗೆ ಮುಖಕ್ಕೆ ಉಗಿಯುತ್ತಿದ್ದಾರಲ್ಲ ಕೊಂಚವೂ ನಾಚಿಕೆ ಎನಿಸುತ್ತಿಲ್ಲವೇ? ತಜ್ಞರ ಎಚ್ಚರಿಕೆ ಕಡೆಗಣಿಸಿ ಮುಂಜಾಗ್ರತೆ ವಹಿಸದೆ ಜನತೆಯನ್ನು ಸಾವಿನ ದವಡೆಗೆ ದೂಡಿದ ತಾವು ಲಸಿಕೆ ನೀಡುವಲ್ಲಿಯೂ ವಿಫಲರಾಗಿದ್ದೀರಿ. ವಿಪಕ್ಷ ನಾಯಕರ ಟೀಕೆ ಮಾಡಿದಾಕ್ಷಣ ನಿಮ್ಮ ಲೋಪ ಮುಚ್ಚಲಾರವು. ಕರ್ನಾಟಕದ ಬಿಜೆಪಿ ಸರ್ಕಾರ ಜನತೆಗೆ ಸಾವಿನ ಭಾಗ್ಯ ಯೋಜನೆ ಜಾರಿಗೊಳಿಸಿದೆ.
ನಿಮ್ಮ ಯೋಜನೆ ಶವ ಭಾಗ್ಯ, ಸ್ಮಶಾನ ಭಾಗ್ಯ ಅಲ್ಲವೇ? ಜನಾಕ್ರೋಶ ಹೆಚ್ಚಿದಾಗ ದಿಕ್ಕು ತಪ್ಪಿಸಲು ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ವೈಯುಕ್ತಿಕವಾಗಿ ಗುರಿಯಾಗಿಸುವ ತಂತ್ರ ಬಿಜೆಪಿಯದ್ದು. ಬಿಜೆಪಿ ಐಟಿ ಸೆಲ್ನಲ್ಲಿ ಹೇಳುವ ಈ ಸುಳ್ಳನ್ನ ಆಸ್ಪತ್ರೆಗಳ ಮುಂದೆ ನಿಂತು ಜನತೆಯ ಎದುರು ಹೇಳುವ ತಾಕತ್ತಿದೆಯೇ ಹೇಳಿ ನಿಮ್ಮ ನಾಯಕರಿಗೆ ಹಾಗು 25 ಸಂಸದರಿಗೆ ಎಂದು ಕಾಂಗ್ರೆಸ್ ಸವಾಲು ಹಾಕಿದೆ.
ಬಿಜೆಪಿ ಶಾಸಕ ಭೈರತಿ ಸುರೇಶ್ ಇತ್ತೀಚೆಗೆ ಸ್ಮಶಾನದಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದರು. ಈ ಬಗ್ಗೆಯೂ ಕಿಡಿಕಾರಿರುವ ಕಾಂಗ್ರೆಸ್, ಬಿಜೆಪಿ ಕರ್ನಾಟಕ ಸ್ಮಶಾನದ ಎದುರೂ ಸಹ ಪ್ರಚಾರದ ತೆವಲು ತೀರಿಸಿಕೊಂಡ ತಾವು ತುತ್ತಿನ ಚೀಲದ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ. ಅದು ಶಾಸಕ ಭೈರತಿ ಸುರೇಶ್ ಅವರ ಸೇವೆಯ ರೇಷನ್ ಕಿಟ್, ಫೋಟೋ ಕೂಡ ಅವರದ್ದೇ, ಅದನ್ನ ನೋಡಲಾಗದ ನಿಮ್ಮ ಬುದ್ಧಿಗೆ ಅಷ್ಟೇ ಅಲ್ಲ ಕಣ್ಣಿಗೂ ಮಂಕು ಕವಿದಿದೆ ಎಂದು ಕಿಡಿಕಾರಿದೆ.