ಲಾಕ್ ಡೌನ್ ಮುಂದುವರೆಸಿದ್ರೆ ಅನುಕೂಲ ಆಗುತ್ತೆ: ಅಶೋಕ್ | ಜನತಾ ನ್ಯೂಸ್
ಬೆಂಗಳೂರು : ಲಾಕ್ ಡೌನ್ ಮುಂದುವರಿಸಿದ್ರೆ ಮತ್ತಷ್ಟು ಅನುಕೂಲ ಆಗುತ್ತೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಹೊಸಕೆರೆಹಳ್ಳಿಯಲ್ಲಿ ಬಿಬಿಎಂಪಿಯ ನೂತನ ಟ್ರಯಾಜ್ ಮತ್ತು ಕೋವಿಡ್ ಸ್ಥಿರೀಕರಣ ಘಟಕ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಲಾಕ್ ಡೌನ್ ಮುಂದುವರೆಸಿದ್ರೆ ಅನುಕೂಲ ಆಗುತ್ತೆ, ಕೇಸ್ ಕಡಿಮೆ ಆಗ್ತಿದೆ. ಸಿಎಂ ಯಡಿಯೂರಪ್ಪರವರಿಗೂ ಮನವರಿಕೆ ಮಾಡ್ತೀವಿ, ಲಾಕ್ ಡೌನ್ ಬೇಕು ಅಂತ ಸಿಎಂಗೆ ಸಲಹೆ ಮಾಡ್ತೀವಿ ಎಂದು ಬೆಂಗಳೂರಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿಯೂ ಲಾಕ್ ಡೌನ್ ವಿಸ್ತರಣೆ ಆಗಬೇಕು. ಸಿಎಂ ಈಗಿರುವ ಲಾಕ್ ಡೌನ್ ಮುಗಿಯೋ 3-4 ದಿನಗಳಲ್ಲಿ ಸಭೆ ಮಾಡ್ತಾರೆ. ಸಭೆಯಲ್ಲಿ ಈ ಬಗ್ಗೆ ಸಲಹೆ ಕೊಡ್ತೀವಿ. ಸಿಎಂ ಅಂತಿಮವಾಗಿ ಲಾಕ್ ಡೌನ್ ಮುಂದುವರಿಸುವ ನಿರ್ಧಾರ ಮಾಡ್ತಾರೆ ಎಂದರು.
ಮಕ್ಕಳಿಗಾಗಿ ವಿಶೇಷ ಕೇಂದ್ರ ಪ್ರಾರಂಭ ಮಾಡುವ ವಿಚಾರದ ಬಗ್ಗೆ ವಿವರಿಸಿದ್ದಾರೆ. 50 ಮಕ್ಕಳ ಬೆಡ್ ಪ್ರಾರಂಭ ಮಾಡಲಾಗುತ್ತಿದೆ. ಪೋಷಕರಿಗೂ ಉಳಿಯಲು ಅವಕಾಶ ನೀಡಲಾಗುತ್ತದೆ. ಮಕ್ಕಳಿಗೆ ಆಗುವ ಸಮಸ್ಯೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ಹತ್ತು ದಿನಗಳಿಂದ ನಮ್ಮ ಅಧಿಕಾರಿಗಳು ಡಾಕ್ಟರ್ಗಳು ಶ್ರಮವಹಿಸಿ ಈ ಕೇಂದ್ರ ಮಾಡಿದ್ದಾರೆ. ಆಕ್ಸಿಜನ್ ಕಡಿಮೆ ಪ್ರಮಾಣದಲ್ಲಿ ಬೇಕಿರುವ ರೋಗಿಗಳಿಗೆ ಈ ಕೊವಿಡ್ ಆರೈಕೆ ಕೇಂದ್ರ ಉಪಯೋಗ ಆಗಲಿದೆ. ಡಾಕ್ಟರ್ಗಳು, ಸ್ಪೆಷಲಿಸ್ಟ್ಗಳು ಇಲ್ಲಿ ಇರಲಿದ್ದಾರೆ. ಮುಂದೆ ಮೂರನೇ ಅಲೆಗೂ ಕೂಡಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.