ರೆಮ್ಡೆಸಿವಿರ್ ನಕಲಿ ದಂಧೆಯಲ್ಲಿ ವೈದ್ಯರೇ ಕಿಂಗ್ಪಿನ್: ಖಾಲಿ ಇಂಜಕ್ಷನ್ ನಲ್ಲಿ ಗ್ಲೂಕೋಸ್ ನೀರು ತುಂಬಿಸಿ ಮಾರಾಟ | ಜನತಾ ನ್ಯೂಸ್
ಬೆಂಗಳೂರು : ಕೊರೊನಾ ಸೋಂಕಿತರನ್ನು ಸುಲಿಗೆ ಮಾಡಲು ನಾನಾ ದಾರಿ ಹುಟ್ಟಿಕೊಂಡಿವೆ. ಖಾಲಿ ರೆಮ್ಡೆಸಿವಿರ್ ವಯಲ್ ನಲ್ಲಿ ಎಸ್. ಎನ್ ಗ್ಲೂಕೋಸ್ ಬಾಟ್ಲಿ ನೀರು ತುಂಬಿಸಿ ಸಾವಿರಾರು ರೂಪಾಯಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೊಸೂರು ರಸ್ತೆಯ ಮಾತೃ ಆಸ್ಪತ್ರೆ ವೈದ್ಯ ಡಾ. ಸಾಗರ್, ಐಸಿಯು ವಾರ್ಡ್ಬಾಯ್ ಕೃಷ್ಣ ಸೇರಿ ನಾಲ್ವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರು ರಸ್ತೆಯ ನಿವಾಸಿ ರವಿಕುಮಾರ್, ನಾಗವಾರದ ಮನಿರಾಜ್, ಕಾಮಾಕ್ಷಿಪಾಳ್ಯದ ನಿವಾಸಿ ಕೃಷ್ಣ ಬಂಧಿತ ಆರೋಪಿಗಳು.
ಬಂಧಿತ ಕೃಷ್ಣ ಹೊಸೂರು ರಸ್ತೆಯಲ್ಲಿರುವ ಹೊಸೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.
ಬಂಧಿತರಿಂದ ಐವತ್ತೈದು ಸಾವಿರ ರೂಪಾಯಿ ನಗದು ಮತ್ತು 9 ಬಾಟಲಿ ನಕಲಿ ರೆಮ್ಡೆಸಿವಿರ್( ಗ್ಲೂಕೋಸ್ ದ್ರಾವಣ) ವಶಪಡಿಸಿಕೊಂಡಿದ್ದಾರೆ. ಈ ಕಿರಾತಕರು ಹಲವರಿಗೆ ಗ್ಲೋಕೋಸ್ ನೀರನ್ನೇ ರೆಮ್ಡೆಸಿವಿರ್ ಅಂತ ನಂಬಿಸಿ ಮಾರಾಟ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಸರ್ಕಾರದಿಂದರ ರೋಗಿಗಳ ಹೆಸರಿನಲ್ಲಿ ಬೇಕಾದಷ್ಟು ರೆಮ್ಡೆಸಿವಿರ್ ಪಡೆಯುತ್ತಿದ್ದ ಇವರು ಅವುಳಲ್ಲಿ ರೋಗಿಗಳಿ ಅರ್ಧದಷ್ಟು ಮಾತ್ರ ನೀಡಿ, ಉಳಿದವನ್ನು ದುಬಾರಿ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಒಂದು ರೆಮ್ಡೆಸಿವಿರ್ ಔಷಧವನ್ನು 20 ಸಾವಿರ ರೂ.ಗೂ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇನ್ನು ರೋಗಿಗಳಿಗೆ ನೀಡಿ ಖಾಲಿಯಾದ ವಯಲ್ಗೆ ಗ್ಲುಕೋಸ್ ತುಂಬಿ ಅದನ್ನೇ ಸೀಲ್ ಮಾಡಿಸಿ ಅಸಲಿ ರೆಮ್ಡೆಸಿವಿರ್ ಎಂದೂ ಮಾರಾಟ ಮಾಡುತ್ತಿದ್ದರು.