ಸೆಪ್ಟೆಂಬರ್20 ರಿಂದ 6 ಸಭೆಗಳಲ್ಲಿ ಮುಖ್ಯಮಂತ್ರಿಗಳಿಗೆ 2ನೇ ಅಲೆ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಸಿದ್ದರು - ಬಿಜೆಪಿ | ಜನತಾ ನ್ಯೂಸ್
ನವದೆಹಲಿ : ಸೆಪ್ಟೆಂಬರ್ 2020 ರಿಂದ ಈ ವರ್ಷದ ಏಪ್ರಿಲ್ ವರೆಗೆ ಅಂದರೆ, ಕಳೆದ ವರ್ಷ ಸೆಪ್ಟೆಂಬರ್ 23 ರಿಂದ ಇತ್ತೀಚಿನ ಏಪ್ರಿಲ್ 23ರವರೆಗೆ, ಪ್ರಧಾನಿ ಮೋದಿ ಮುಖ್ಯಮಂತ್ರಿಗಳೊಂದಿಗೆ ಆರು ವರ್ಚುಯಲ್ ಸಭೆ ನಡೆಸಿದ್ದು, ಕೋವಿಡ್ ಸಂಕ್ರಾಮಿಕದ ಕುರಿತು ಪದೇಪದೇ ಎಚ್ಚರಿಕೆ ನೀಡಿದ್ದಾರೆ, ಎಂದು ಬಿಜೆಪಿ ನಿನ್ನೆ ಗುರುವಾರ ಸಾಕ್ಷಿ ಸಮೇತವಾಗಿ ಪ್ರಕಟಿಸಿದೆ.
ಸೋಂಕಿನ ಎರಡನೇ ಅಲೆಗಳ ಅಪಾಯವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ, ಎಂಬ ಪ್ರತಿಪಕ್ಷದ ಆರೋಪವನ್ನು ಖಂಡಿಸಿದ ಬಿಜೆಪಿ ಗುರುವಾರ, ಮೋದಿ ಸರ್ಕಾರವು ಎರಡನೇ ತರಂಗದ ಸನ್ನಿಹಿತತೆಯ ಬಗ್ಗೆ ರಾಜ್ಯಗಳನ್ನು ಎಷ್ಟೆಷ್ಟು ಬಾರಿಗೆ ಎಚ್ಚರಿಸಿದೆ, ಸಲಹೆಗಳನ್ನು ಹೊರಡಿಸಿದ ಮತ್ತು ಎಷ್ಟು ಬಾರಿಗೆ ಇತರೆ ಕ್ರಮಗಳನ್ನು ತೆಗೆದುಕೊಂಡಿದೆ, ಎಂಬುದರ ಕುರಿತು ವಿವರಗಳನ್ನು ಪ್ರಕಟಿಸಿದೆ.
ಇದಲ್ಲದೆ, ಮಾರ್ಚ್ 17ರಂದು ಸಿಎಂಗಳೊಂದಿಗೆ ಪ್ರಧಾನ ಮಂತ್ರಿಗಳ ಸಂವಹನದ ಸಂಧರ್ಭದಲ್ಲಿ ದಿನಕ್ಕೆ 30,000 ಹೊಸ ಪ್ರಕರಣಗಳನ್ನು ಮಾತ್ರ ಭಾರತ ಹೊಂದಿತ್ತು, ಎಂದು ಪಕ್ಷ ಹೇಳಿದೆ. ಪ್ರತಿಪಕ್ಷಗಳ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ(ಪಶ್ಚಿಮ ಬಂಗಾಳ) ಮತ್ತು ಭೂಪೇಶ್ ಬಾಗೆಲ್(ಛತ್ತೀಸ್ಗಡ) ವಿಧಾನಸಭಾ ಚುನಾವಣೆಯಲ್ಲಿ ನಿರತರಾಗಿರುವುದರಿಂದ ಈ ಸಭೆಗಳನ್ನು ಕೈ ಬಿಟ್ಟಿದ್ದರು ಎಂದು ಪಕ್ಷ ಆರೋಪಿಸಿದೆ. ಕಾಂಗ್ರೆಸ್ ನ ಪ್ರಮುಖ ಪ್ರಚಾರಕರಾಗಿ ಬಾಗೇಲ್ ಅಸ್ಸಾಂನಲ್ಲಿ ದೀರ್ಘಕಾಲ ಇದ್ದರು.
ಮಾರ್ಚ್ 17ರಂದು ಪ್ರಧಾನಿ ಮೋದಿಯವರ ಸಿಎಂಗಳೊಂದಿಗೆ ನಡೆಸಿದ ಸಭೆಗಳ ವೀಡಿಯೊವನ್ನು ಬಿಜೆಪಿ ಪ್ರಸಾರ ಮಾಡಿದ್ದು, ಅಲ್ಲಿ ಸಿಎಂಗಳಿಗೆ ಸೋಂಕಿನ ಹೊಸ ಏರಿಕೆಯ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದರು, ರಾಜ್ಯಗಳು ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಗತಿ ಸಾಧಿಸುವುದನ್ನು ನಿಲ್ಲಿಸಿದ ಬಗ್ಗೆ ಎಚ್ಚರಿಸಿದ ಅವರು ಮತ್ತು ಪರಿಸ್ಥಿತಿ ಕೈಮೀರುವ ಮೊದಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳೊಂದಿಗಿನ ವರ್ಚುಯಲ್ ಸಂವಾದದಲ್ಲಿ, ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಸೋಂಕುಗಳ ವಿಷಯವನ್ನು ಪದೇ ಪದೇ ಎತ್ತಿದ್ದಾರೆ ಮತ್ತು ಉಲ್ಬಣವನ್ನು ನಿಭಾಯಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳೊಂದಿಗಿನ ಸಂವಾದದಲ್ಲಿ, ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಸೋಂಕುಗಳ ಬಗ್ಗೆ ಕಳವಳವನ್ನು ಪದೇ ಪದೇ ಎತ್ತಿದ್ದಾರೆ ಮತ್ತು ಉಲ್ಬಣಗೊಳ್ಳುತ್ತಿರುವ ಪ್ರಕರಣಗಳನ್ನು ನಿಭಾಯಿಸಲು ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ.
ನಮ್ಮ ಕೋವಿಡ್ ಪರಿಸ್ಥಿತಿ ನಿರ್ವಹಣೆಯ ಬಗ್ಗೆ ನಮಗೆ ವಿಶ್ವಾಸವಿದೆ, ಆದರೆ ನಮ್ಮ ಆತ್ಮವಿಶ್ವಾಸವು ಅತಿಯಾದ ಆತ್ಮವಿಶ್ವಾಸವಾಗಬಾರದು, ಎಂದು ಮೋದಿ ಎಚ್ಚರಿಸಿದ್ದರು ಮತ್ತು ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯಗಳು ಪೂರ್ವಭಾವಿ ಕ್ರಮ ಕೈಗೊಳ್ಳಬೇಕು, ಎಂದು ಒತ್ತಾಯಿಸಿದ್ದರು ಮತ್ತು ಮೈಕ್ರೋ ಕಾಂಟೈನ್ಮೆಂತ್ ವಲಯಗಳ ರಚನೆಗೆ ಒತ್ತಾಯಿಸಿದ್ದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿಯೂ ಹೆಚ್ಚಿನ ಪ್ರಕರಣಗಳ ಹೆಚ್ಚಾಗಿರುವ 60 ಜಿಲ್ಲೆಗಳತ್ತ ಗಮನಹರಿಸಿ, ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸುವಂತೆ ಪ್ರಧಾನಿ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದರು, ಎಂದು ಬಿಜೆಪಿ ಒತ್ತಿ ಹೇಳಿದೆ. ಅದೇ ಸಭೆಯಲ್ಲಿ, ಕೋವಿಡ್-ನಿರ್ದಿಷ್ಟ ಮೂಲಸೌಕರ್ಯಕ್ಕಾಗಿ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯನ್ನು ಬಳಸುವ ಮಿತಿಯನ್ನು 35% ರಿಂದ 50% ಕ್ಕೆ ಹೆಚ್ಚಿಸಲಾಗಿದೆ, ಎಂದು ಪ್ರಧಾನಿ ಮುಖ್ಯಮಂತ್ರಿಗಳಿಗೆ ತಿಳಿಸಿದ್ದರು.