ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ | ಜನತಾ ನ್ಯೂಸ್
ಚಿಕ್ಕಮಗಳೂರು : ಮನೆಗೆ ಬಂದ ಸೋಂಕಿತ ಅಣ್ಣನನ್ನು ತಮ್ಮನೊಬ್ಬ ಭೀಕರವಾಗಿ ಕೊಲೆಗೈದ ಘಟನೆ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ರವಿವಾರ ನಡೆದಿದೆ.
ಮಹಾವೀರ9 (45)ಕೊಲೆಯಾದ ವ್ಯಕ್ತಿ. ಪಾಶ್ವನಾಥ ಕೊಲೆ ಆರೋಪಿ. ಕೊರೋನ ಸೋಂಕಿಗೆ ತುತ್ತಾಗಿದ್ದ ಮಹಾವೀರ ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದಾರೆ. ಸೋಂಕು ಸಂಪೂರ್ಣ ಗುಣಮುಖವಾಗದೆ ಮನೆಗೆ ಬಂದಿದ್ದ ಅಣ್ಣನನ್ನು ಗುಣಮುಖನಾಗದೆ ಯಾಕೆ ಬಂದೆ ? ಎಂದು ಪ್ರಶ್ನಿಸಿದ್ದಾನೆ.
ತಮ್ಮ ಪಾಶ್ವನಾಥನ ಪ್ರಶ್ನೆಯಿಂದ ಸಿಟ್ಟಾದ ಅಣ್ಣ ಮಾತಿಗೆ ಮಾತು ಬೆಳೆಸಿದ್ದಾನೆ. ತಮ್ಮ ಅಣ್ಣನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :Chikkamagaluru