ಸಿದ್ಧರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಅನ್ನೋದನ್ನ ಮರೆತು ರಾಜಕೀಯ ಮಾಡುತ್ತಿದ್ದಾರೆ | ಜನತಾ ನ್ಯೂಸ್
ಕಲಬುರಗಿ : ಸಿದ್ಧರಾಮಯ್ಯನವರು ವಿರೋಧ ಪಕ್ಷದ ನಾಯಕ ಅನ್ನೋದು ಮರೆತು ರಾಜಕೀಯ ಮಾಡ್ತಿದ್ದಾರೆ. ಅದೇ ಕಾರಣಕ್ಕಾಗಿ ಹೈಕೋರ್ಟ್ ಕಾಂಗ್ರೆಸ್ನವ್ರಿಗೆ ಛೀಮಾರಿ ಹಾಕಿದ್ರೂ, ಸಂವಿಧಾನ ಮರೆತು ವರ್ತನೆ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಝೂಮ್ ಮೀಟಿಂಗ್ ಮಾಡಲು ಅವಕಾಶ ನಿರಾಕರಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಸಹ ಮುಖ್ಯಮಂತ್ರಿಯಾದವರು, ಹೇಗಿರಬೇಕು ಎನ್ನುವುದು ಅವರಿಗೂ ಗೊತ್ತಿರಬೇಕು. ವಿರೋಧ ಪಕ್ಷದ ನಾಯಕರು ಸಾಂವಿಧಾನಿಕ ಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ಎಲ್ಲೆಮೀರಿ ವರ್ತನೆ ಮಾಡಿದ್ರೆ, ಸರ್ಕಾರಕ್ಕೂ ನಿಯಮಗಳು ಇರುತ್ವೆ ಎಂದರು.
ಕೋವಿಡ್ ಒಂದು ಯುದ್ಧ ಕಾಲ. ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಮರೆತು ಜನರ ರಕ್ಷಣೆಯಲ್ಲಿ ತೊಡಗಬೇಕು, ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ರಾಜಕೀಯ ಮಾಡುತ್ತಿದ್ದಾರೆ.
ಅದೇ ಕಾರಣಕ್ಕಾಗಿ ಹೈಕೋರ್ಟ್ ಕಾಂಗ್ರೆಸ್ನವರಿಗೆ ಛೀಮಾರಿ ಹಾಕಿದರೂ, ಸಂವಿಧಾನ ಮರೆತು ವರ್ತನೆ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.