ಕರೊನಾ ಸೋಂಕಿತ ಅತ್ತೆಯನ್ನ ಮನೆಗೆ ಸೇರಿಸಿಕೊಳ್ಳದ ಮನೆ ಅಳಿಯ! | ಜನತಾ ನ್ಯೂಸ್
ಮಂಡ್ಯ : ಅತ್ತೆಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅಳಿಯ ಮನೆಗೆ ಸೇರಿಸಲು ಒಪ್ಪದೇ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬೈದು ಕಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಅರೆಚಾಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ವೈದ್ಯರು ಸಿದ್ದಮ್ಮರನ್ನು ಹೋಂ ಐಸೋಲೇಷನ್ನಲ್ಲಿ ಇರುವಂತೆ ಸೂಚಿಸಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿದ್ದಮ್ಮ ಅವರನ್ನು ಮನೆಗೆ ಬಿಡಲು ಬಂದಿದ್ದಾರೆ.
ಈ ವೇಳೆ ಸಿದ್ದಮ್ಮಳ ಅಳಿಯ ಮುತ್ತೇಗೌಡ, ಆಕೆಗೆ ಕೊರೊನಾ ಪಾಸಿಟಿವ್ ಬಂದಿದೆ. ಆಕೆಯನ್ನು ಮನೆ ಸೇರಿಕೊಳ್ಳಲ್ಲ, ಆಕೆಯನ್ನು ಕರೆದುಕೊಂಡು ಹೋಗಿ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬೈದಿದ್ದಾನೆ.
ಅಂದಹಾಗೇ ಈ ಅತ್ತೆಯೇನೂ ಅಳಿಯನ ಮನೆಗೆ ಹೋಗಿರಲಿಲ್ಲ. ಅಳಿಯನೇ ಅತ್ತೆ ಮನೆಯಲ್ಲೇ ವಾಸವಿದ್ದ. ಇದೀಗ ಕೋವಿಡ್ ಸೋಂಕು ತಗುಲಿದ ಅತ್ತೆಯನ್ನೇ ಮನೆಗೆ ಸೇರಿಸಿಕೊಳ್ಳಲು ಒಪ್ಪಿಲ್ಲ.
ಎಷ್ಟೇ ಮನವೊಲಿಸಿದರೂ ಆತ ಮಾತ್ರ ಅತ್ತೆಯನ್ನ ಮನೆಗೆ ಸೇರಿಸಿಕೊಳ್ಳಲೇ ಇಲ್ಲ. ಕೊನೆಗೆ ಆಸ್ಪತ್ರೆ ಸಿಬ್ಬಂದಿಯೇ ಮದ್ದೂರು ತಾಲೂಕು ಆಸ್ಪತ್ರೆಗೆ ಸಿದ್ದಮ್ಮನನ್ನು ದಾಖಲು ಮಾಡಲಾಗಿದೆ..