ಪ್ರೇಮ ವೈಫಲ್ಯಕ್ಕೆ ಕೆರೆಗೆ ಹಾರಿ ಅತಿಥಿ ಉಪನ್ಯಾಸಕ ಆತ್ಮಹತ್ಯೆ | ಜನತಾ ನ್ಯೂಸ್
ಕಲಬುರಗಿ: : ಪ್ರೇಮ ವೈಫಲ್ಯಕ್ಕೆ ಮನನೊಂದು ಅತಿಥಿ ಉಪನ್ಯಾಸಕ ಕಲಬುರಗಿಯ ಅಪ್ಪನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಅತಿಥಿ ಉಪನ್ಯಾಸಕನನ್ನು ನಗರದ ಲಾಳಗೇರಿ ಬಡಾವಣೆಯ ನಿವಾಸಿ ಅಂಬರೀಶ್ (35) ಎಂದು ಗುರುತಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಉಪನ್ಯಾಸಕ ಹಾಗೂ ಅದೇ ಬಡಾವಣೆಯ ಯುವತಿ ಪರಸ್ಪಸ ಪ್ರೀತಿಮಾಡುತ್ತಿದ್ದರು.
ಲೈಫ್ ಸೆಟ್ಲ್ ಆದ ತಕ್ಷಣ ಕುಟುಂಬಸ್ಥರನ್ನು ಒಪ್ಪಿಸಿ ಮದುವೆ ಆಗುವುದಕ್ಕೂ ನಿರ್ಧರಿಸಿದ್ದರು. ಆದರೆ ಈ ಮಧ್ಯೆ ಯುವತಿಗೆ ಕುಟುಂಬಸ್ಥರು ಬೇರೆ ಕಡೆ ಮದುವೆ ಮಾಡಿದ್ದಾರೆ.
ನಿನ್ನೆ ಮನೆಗೆ ಫೋನ್ ಮಾಡಿ ಹೇಳಿ ಕೆರೆಗೆ ಹಾರಿದ್ದರು ಎಂದು ಹೇಳಲಾಗಿದೆ. ತೀವ್ರ ಶೋಧ ಕಾರ್ಯಾಚರಣೆ ಬಳಿಕ ಇಂದು ಬೆಳಗ್ಗೆ ಶವ ಪತ್ತೆಯಾಗಿದೆ.
ಆತ್ಮಹತ್ಯೆ ಸಂಬಂಧ ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.