ಪಶ್ಚಿಮ ಬಂಗಾಳ ಚಂಡಮಾರುತ ಪರಿಶೀಲನಾ ಸಭೆಯಲ್ಲಿ ಅಭೂತಪೂರ್ವ ಶಿಷ್ಟಾಚಾರ ಉಲ್ಲಂಘನೆ : ಮಮತಾ ಬ್ಯಾನರ್ಜಿ ನಡೆಗೆ ಭಾರಿ ಟೀಕೆ | ಜನತಾ ನ್ಯೂಸ್
ಕೊಲ್ಕೊತ್ತಾ : ಯಾಸ್ ಚಂಡಮಾರುತದ ಕುರಿತಾದ ಪ್ರಧಾನಿ ನರೇಂದ್ರ ಮೋದಿಯವರ ಪರಿಶೀಲನಾ ಸಭೆಯಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಅಧಿಕಾರಿಗಳು ಗೈರುಹಾಜರಾಗಿದ್ದಾರೆ, ರಾಜ್ಯದ ಜನರ ಕಲ್ಯಾಣವನ್ನು ನಿರ್ದಾಕ್ಷಿಣ್ಯ, ಸೊಕ್ಕಿನ ಮತ್ತು ನಿರ್ಲಕ್ಷಿಸಿದೆ, ಎಂದು ಕೇಂದ್ರ ಸರ್ಕಾರದ ಮೂಲಗಳು ಶುಕ್ರವಾರ ತಿಳಿಸಿವೆ. ಮತ್ತು ಈ ನಡೆ ಸ್ವಾಮ್ಯ ಮತ್ತು ಸಂಯುಕ್ತ ವ್ಯವಸ್ಥೆಗೆ ಅಭೂತಪೂರ್ವ ಹೊಡೆತವಾಗಿದೆ, ಎನ್ನಲಾಗಿದೆ.
“ಇಂದು, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಪ್ರಧಾನಿ ಕಲೈಕುಂಡ ವಾಯುನೆಲೆಗೆ ಬಂದಿಳಿದು ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಬಂದಾಗ, ಪಶ್ಚಿಮ ಬಂಗಾಳ ಸರ್ಕಾರದಿಂದ ಯಾರೂ ಹಾಜರಿರಲಿಲ್ಲ” ಮತ್ತು “ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಇಬ್ಬರೂ ಅದೇ ಆವರಣದಲ್ಲಿದ್ದರೂ, ಅವರು ಪ್ರಧಾನ ಮಂತ್ರಿಯವರನ್ನು ಬರಮಾಡಿಕೊಳ್ಳಲು ಬರಲಿಲ್ಲ, ಎಂದು ಮೂಲದಿಂದ ತಿಳಿದುಬಂದಿದೆ.
ಪ್ರಧಾನಿ ಮೋದಿ, ರಾಜ್ಯಪಾಲ ಜಗದೀಪ್ ಧಂಕಡ್ ಮತ್ತು ಕೇಂದ್ರ ಸಚಿವರ ತಂಡವು ಪಶ್ಚಿಮ ಬಂಗಾಳದ ಪ್ರತಿನಿಧಿಗಳು ಬರುವ ವರೆಗೆ ಅರ್ಧ ಘಂಟೆಯವರೆಗೆ ತಾಳ್ಮೆಯಿಂದ ಕಾಯುತ್ತಿದ್ದರು, ಎಂದು ಹೇಳಲಾಗಿದೆ.
"ಇದ್ದಕ್ಕಿದ್ದಂತೆ ಧಾವಿಸಿದ ಮಮತಾ ಬ್ಯಾನರ್ಜಿ, ಅಹಂಕಾರದಲ್ಲಿ, ಚಂಡಮಾರುತದ ಪ್ರಭಾವದ ಬಗ್ಗೆ ಒಂದು ಕಾಗದದ ರಾಶಿಯನ್ನು ಪ್ರಧಾನಮಂತ್ರಿಯವರಿಗೆ ಹಸ್ತಾಂತರಿಸಿದರು ಮತ್ತು ಇತರ ಭೇಟಿಗಳನ್ನು ಪೂರೈಸ ಬೇಕಾದ್ದರಿಂದ ತಾವು ಹೊರಡಬೇಕಿದೆ ಎಂದು ಹೇಳಿ ಹೊರಟು ಹೋಗಿದ್ದಾರೆ", ಎಂದು ತಿಳಿದುಬಂದಿದೆ.