ಮಮತಾ ದುರಂಕಾರದಿಂದ ಪ.ಬಂ. ಜನತೆಯ ಅಪಮಾನ : ಮಮತಾಗೆ ಶಿವರಾಜ್ ಸಿಂಗ್ ಚೌಹಾನ್ ನೀತಿ ಪಾಠ | ಜನತಾ ನ್ಯೂಸ್
ಭೋಪಾಲ್ : ಮಮತಾ ಅವರ ಹುಂಬತನದ ಘೋರ ನಿಂಧನೆ ಮಾಡುವುದಾಗಿ ಹೇಳಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು, ಮಮತಾ ನಡವಳತೆಯಿಂದ ಬಂಗಾಳದ ಜನರಿಗೆ ಮಾಡಿದ ಅವಮಾನ ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ. ಚಂಡಮಾರುತದಿಂದ ಪಶ್ಚಿಮ ಬಂಗಾಳ ರಾಜ್ಯಕ್ಕಾದ ಹಾನಿಯ ಕುರಿತಾದ ವೈಮಾನಿಕ ಸಮೀಕ್ಷೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದ ವಿಮರ್ಶೆ ಸಭೆಯನ್ನು ತಿರಸ್ಕರಿಸಿದ್ದಕ್ಕಾಗಿ, ಶಿವರಾಜ್ ಸಿಂಗ್ ಚೌಹಾನ್ ಟಿಎಂಸಿ ಮುಖ್ಯಸ್ಥೆ ಅವರನ್ನು ಕಟುವಾಗಿ ನಿಂದಿಸಿದ್ದಾರೆ.
"ಮೋದಿಜಿ ದೇಶದ ಪ್ರಧಾನ ಮಂತ್ರಿ ಅವರ ಹಿಂದೆ ದೇಶ ನಡೆಯುತ್ತದೆ. ಅವರು ಪಶ್ಚಿಮ ಬಂಗಾಳಕ್ಕೆ ಆ ರಾಜ್ಯದ ಕಲ್ಯಾಣಕ್ಕಾಗಿ ಹೋಗಿದ್ದರು. ಅಲ್ಲಿಯ ಜನರ ಕಷ್ಟವನ್ನು ಆಲಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಈ ರೀತಿಯ ದುರ್ನಡತೆ ಪ.ಬಂ. ಜನರ ಅವಮಾನವಾಗಿದೆ", ಎಂದು ಟೀಕಿಸಿದರು.
ನಾನು ಮುಖ್ಯಮಂತ್ರಿಯೂ ಆಗಿದ್ದೇನೆ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಿ ಅವರ ಕಾಲದಲ್ಲೂ 9 ವರ್ಷ ಈ ಹುದ್ದೆಯಲ್ಲಿದ್ದೆ, ಆದರೆ ನಾನು ಅವರನ್ನು ಎಂದಿಗೂ ಅಗೌರವಗೊಳಿಸಲಿಲ್ಲ. ದೇಶದ ಹೊರಗೆ ಅವರಿಗೆ ಅಂಡರ್ ಅಚಿವರ್ ಎಂದು ಟೀಕಿಸಿದಾಗಲೂ ಅವರನ್ನು ನಾವು ಟೀಕಿಸಿರಲಿಲ್ಲ. ಏಕೆಂದರೆ ದೇಶದ ಪ್ರಧಾನ ಮಂತ್ರಿ ದೇಶದ ಸಮ್ಮಾನ ವಾಗಿರುತ್ತಾರೆ. ಯಾವುದಾದರೂ ರಾಜ್ಯದ ಮುಖ್ಯಮಂತ್ರಿ ಈ ರೀತಿಯ ನಡತೆ ಪ್ರದರ್ಶಿಸುವುದರ ಮೂಲಕ, ತಾನು ಪ್ರಧಾನಿಯವರ ಅವಮಾನ ಮಾಡಿದ್ದೇನೆ ಎಂದು ಭ್ರಮೆ ಪಟ್ಟರೆ. ಮಮತಾ ದೀದಿ ನೀನು ನಿಮ್ಮನ್ನು ತುಂಬಾ ಚಿಕ್ಕವರಾಗಿಸಿದ್ದಿಯಾ", ಎಂದು ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.
"ನಿಮ್ಮನ್ನು ಆಯ್ಕೆ ಮಾಡಿದ ಜನರ ಕಲ್ಯಾಣವನ್ನು ಚರ್ಚಿಸಲು ನೀವು ಬಯಸುವುದಿಲ್ಲ, ಇದು ನಿಮ್ಮ ದುರಂಕಾರ ಅಲ್ಲದಿದ್ದರೆ ಏನು?" ಎಂದು ಅವರು ಕೇಳಿದರು.
ಶುಕ್ರವಾರ(ಮೇ 28, 2021) ಪಿಎಂ ನರೇಂದ್ರ ಮೋದಿಯವರೊಂದಿಗೆ ಯಾಸ್ ವಿಮರ್ಶಾತ್ಮಕ ಸಭೆಯನ್ನು ಕೈಬಿಟ್ಟಿದ್ದಕ್ಕಾಗಿ ಮಮತಾ ಬ್ಯಾನರ್ಜಿಯ ವಿರುದ್ಧ ವಾಗ್ದಾಳಿ ನಡೆಸಿದರು. ಟಿಎಂಸಿ ಮುಖ್ಯಸ್ಥೆ ಅವರ ವರ್ತನೆ ರಾಜ್ಯದ ಮುಖ್ಯಮಂತ್ರಿಯಾಗಿ ಪಶ್ಚಿಮ ಬಂಗಾಳದ ಜನರಿಗೆ ಮಾಡಿದ ಅವಮಾನ. "ಸೂರ್ಯನನ್ನು ನೋಡಿ ಯಾರಾದರೂ ಉಗಿದರೆ. ಆ ಉಗುಳು ಅವರ ಮುಖದ ಮೇಲೆ ಬೀಳುವುದು", ಎಂದು ಹೇಳಿದ್ದಾರೆ.