ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಐವರು ಅರೆಸ್ಟ್! 72ಲಕ್ಷ ನಕಲಿ ನೋಟು ವಶಕ್ಕೆ | ಜನತಾ ನ್ಯೂಸ್
ಉತ್ತರ ಕನ್ನಡ : ಲಕ್ಷಾಂತರ ರುಪಾಯಿ ಮೌಲ್ಯದ ಕೋಟಾ ನೋಟು ವ್ಯವಹಾರ ಮಾಡುತ್ತಿದ್ದ ಆರು ಜನರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು 6 ಮಂದಿಯನ್ನು ಬಂಧಿಸಿ 4.5 ಲಕ್ಷ ಅಸಲಿ ನೋಟು, 72 ಲಕ್ಷದ ಖೋಟಾ ನೋಟು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಮಹಾರಾಷ್ಟ್ರದ ಕಿರಣ ದೇಸಾಯಿ 40 ವರ್ಷ, ಗಿರೀಶ ಪೂಜಾರಿ 42ವರ್ಷ , ಬೆಳಗಾವಿಯ ಅಮರ ನಾಯ್ಕ 30 ವರ್ಷ , ಸಾಗರ ಕುಣ್ಣೂರ್ಕರ್ 28 ವರ್ಷ, ದಾಂಡೇಲಿಯ ಶಬ್ಬೀರ್ ಕುಟ್ಟಿ 45 ವರ್ಷ , ಶಿವಾಜಿ ಕಾಂಬ್ಳೆ 52 ವರ್ಷ ರನ್ನು ಬಂಧಿಸಲಾಗಿದೆ.
ದಾಂಡೇಲಿ ನಗರದ ಶಿವಾಜಿ ತಂದೆ ಶ್ರವಣ ಕಾಂಬಳೆ ಹಾಗೂ ಶಬ್ಬೀರ, ಅಂತೋನಿ ತಂದೆ ಇಸ್ಮಾಯಿಲ್ ಕುಟ್ಟಿ ಈ ಇಬ್ಬರು ನಮಗೆ 4,50,000/-ರೂ ಹಣವನ್ನು ನೀಡಿದರೆ, ಅದಕ್ಕೆ ಬದಲಾಗಿ 9,00,000/- ರೂ ನೀಡುತ್ತೇವೆ ಎಂದು ನಂಭಿಸಿ ದಾಂಡೇಲಿಗೆ ಬರಲು ಸೂಚಿಸಿದ ವೇಳೆ ದಾಳಿ ನಡೆಸಲಾಗಿದೆ.
ಶಿವಾಜಿ ಈತನ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ 500/- ರೂ ಮುಖ ಬೆಲೆಯ ನಕಲಿ ನೋಟಿನ ಬಂಡಲುಗಳು 88, 2000/- ರೂ ಮುಖ ಬೆಲೆಯ ನಕಲಿ ನೋಟಿನ ಬಂಡಲುಗಳು-6, 200/- ರೂ. ಮುಖ ಬೆಲೆಯ ನಕಲಿ ನೋಟಿನ ಬಂಡಲುಗಳು-28 ಹಾಗೂ 100/ ರೂ. ಮುಖ ಬೆಲೆಯ ನಕಲಿ ನೋಟುಗಳ ಬಂಡಲು-2 ಮತ್ತು ಎ-4 ಸೈಜ್ ಹಾಳೆಯಲ್ಲಿ ಮುದ್ರಿಸಿರುವ 500/- ಮುಖ ಬೆಲೆಯ ಇರುವ ನಕಲಿ ನೋಟುಗಳು, ಪೇಪರ ಕಟಿಂಗ್ ಮಷೀನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ..
ವ್ಯವಹಾರಕ್ಕೆ ಬಳಸಿದ್ದ ಎರಡು ಕಾರು ಸಹ ವಶಪಡಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.