ಯಡಿಯೂರಪ್ಪ ಎ1 ಆರೋಪಿ, ಮುಖ್ಯಮಂತ್ರಿಯೊಂದಿಗೆ ಅಧಿಕಾರಿಗಳನ್ನು ಸೇರಿಸಿ ಕೇಸ್ ಹಾಕ್ತಿನಿ | ಜನತಾ ನ್ಯೂಸ್
ಹಾಸನ : ರಾಜ್ಯದ ನೀರಾವರಿ ಇಲಾಖೆಯೊಂದರಲ್ಲೇ ಕೋಟಿ ಕೋಟಿ ಲೂಟಿ ನಡೆದಿದೆ. ಇದಕ್ಕೆ ಪೂರಕ ದಾಖಲೆ ನನ್ನ ಬಳಿ ಇದೆ, ಯಡಿಯೂರಪ್ಪ ಅವರನ್ನೇ ಎ1 ಮಾಡುತ್ತೇನೆ, ನಾನೇನು ಕೇರ್ ಮಾಡಲ್ಲ, ಕಾನೂನು ಹೋರಾಟ ಮಾಡುತ್ತೇನೆ. ಏನೇನು ನಡಿತಿದೆ ನೀರಾವರಿ ಇಲಾಖೆಯಲ್ಲಿ ಎಂದು ಗೊತ್ತಿದೆ. ಮುಖ್ಯಮಂತ್ರಿಯೊಂದಿಗೆ ಅಧಿಕಾರಿಗಳನ್ನು ಸೇರಿಸಿ ಕೇಸ್ ಹಾಕ್ತಿನಿ. ರಾಜ್ಯವನ್ನು ಬಿಜೆಪಿಗೆ ಅಡ ಇಟ್ಟಿದ್ದಾರಾ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ 3 ತಿಂಗಳಲ್ಲಿ 60 ಸಾವಿರ ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯ ಬಗ್ಗೆ ಸರ್ಕಾರಕ್ಕೆ ನಿರ್ಲಕ್ಷ್ಯವಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ. ರೇವಣ್ಣ ಜಿಲ್ಲೆಯಲ್ಲಿ 2ನೇ ಅಲೆಯಲ್ಲಿ ಸಾವಿನ ಪ್ರಮಾಣ ಶೇ. 1.97 ರಷ್ಟಿದೆ. ಜಿಲ್ಲೆಯಲ್ಲಿ ವ್ಯಾಕ್ಸಿನ್ ನೀಡುವುದರಲ್ಲೂ ರಾಜಕೀಯ ಶುರುವಾಗಿದೆ.
ಕಾರ್ಖಾನೆಗಳ ಮಾಲೀಕರಿಂದ ಹಣ ಪಡೆದು ವ್ಯಾಕ್ಸಿನ್ ನೀಡಲಿ. ಸರ್ಕಾರದ ಉಚಿತ ವ್ಯಾಕ್ಸಿನ್ ಏಕೆ ಕೊಡಬೇಕು. ಹಳ್ಳಿಗಳಲ್ಲಿ ಇದು ವರೆಗೂ ಶೇ.10 ವ್ಯಾಕ್ಸಿನ್ ನೀಡಿಲ್ಲ, ಗ್ರಾಮೀಣ ಪ್ರದೇಶದಲ್ಲಿ ವ್ಯಾಕ್ಸಿನ್ ಇಲ್ಲ, ಇಂದು ಆಟೋ ಡ್ರೈವರ್ಗಳಿಗೆ ಸರ್ಕಾರದಿಂದ ಲಸಿಕೆ ನೀಡಲಾಗುತ್ತಿದೆ.
ಬಿಜೆಪಿ ಶಾಸಕರ ಫೋಟೋ ಏಕೆ ಹಾಕಬೇಕಿತ್ತು. ಯಡಿಯೂರಪ್ಪ ಅವರ ಮನೆಯಿಂದ ಕೊಡುತ್ತಿದ್ದಾರಾ? ಎಂದು ಹೆಚ್.ಡಿ.ರೇವಣ್ಣ ಪ್ರಶ್ನಿಸಿದ್ದಾರೆ. ಶಾಸಕರ ಎರಡು ಕೋಟಿ ಗ್ರಾಂಟ್ ಹಣವನ್ನು ಕೊಡ್ತಿಲ್ಲಾ, ನೀರಾವರಿ ಇಲಾಖೆಯಲ್ಲಿ ನೂರಾರು ಕೋಟಿ ಲೂಟಿ ನಡೆಯುತ್ತಿದೆ. ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ.
ಆರು ಕೋಟಿ ಜನತೆಯ ತೆರಿಗೆ ಹಣದಿಂದ ವ್ಯಾಕ್ಸಿನ್ ಕೊಡುತ್ತಿದ್ದಾರೆ. ರೈತರನ್ನ ಯಾರೂ ಹೇಳೋರು ಕೇಳೋರು ಇಲ್ಲ, ಎಲ್ಲರ ಬಳಿ ಚಂದಾ ಎತ್ತಲು ಯಾಕೆ ಹೋಗಬೇಕು? ಲೂಟಿ ಹೊಡೆಯೋಕಾ? ಮುಖ್ಯಮಂತ್ರಿಗಳೇ ಹಣಕಾಸು ಮಂತ್ರಿ, ಆಮೇಲೆ ಅಧಿಕಾರಿಗಳು, ಅದೇನ್ ಮಾಡುತ್ತಾರೆ ನೋಡೋಣ. ಎಲ್ಲಾ ದಾಖಲೆಗಳನ್ನು ರೆಡಿ ಮಾಡುತ್ತಿದ್ದೇನೆ.
103 ಜನಕ್ಕೆ ಒಂದು ಕಾನೂನು, ಬಿಜೆಪಿ ಶಾಸಕರಿಗೆ ಒಂದು ಕಾನೂನು, ನಾನು ಹೇದರಿಕೊಂಡು ಓಡಿ ಹೋಗಲ್ಲ, ಸಿದ್ದರಾಮಯ್ಯ ಒಬ್ಬರೇ ಕೂಗಾಡುವ ಪರಿಸ್ಥಿತಿಯಿದೆ. ಕಾಂಗ್ರೆಸ್ ವಿರೋಧ ಪಕ್ಷ, ಅವರು ಏನು ಮಾತನಾಡುತ್ತಿಲ್ಲ ಈ ಪರಿಸ್ಥಿತಿ ಬಂದು ಹೋಗಿದೆ ರಾಜ್ಯದಲ್ಲಿ, ದೇವರು ಶಕ್ತಿಕೊಟ್ಟಾಗ ನಾನು ಕೆಲಸ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.