ಮೈಮೇಲೆ ಇಲಿ ಬಿದ್ದಿದ್ದಕ್ಕೆ ಗಾಬರಿಗೊಂಡು ಹೃದಯಾಘಾತದಿಂದ ಯುವತಿ ಮೃತ್ಯು | ಜನತಾ ನ್ಯೂಸ್
ಶಿವಮೊಗ್ಗ : ತೀರ್ಥಹಳ್ಳಿ ಪಟ್ಟಣದಲ್ಲಿ ಇಲಿ ಮೈಮೇಲೆ ಬಿದ್ದು ಕಚ್ಚಿದೆ, ಬಳಿಕ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆ ಮಹಿಳೆ ಮಾರ್ಗಮಧ್ಯೆಯೇ ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕುರುವಳ್ಳಿಯಲ್ಲಿ ಘಟನೆ ನಡೆದಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕುರುವಳ್ಳಿ ಬೊಮ್ಮರಸಯ್ಯನ ಅಗ್ರಹಾರದ ಆಶ್ರಯ ಬಡಾವಣೆಯ ಶಕುಂತಲಾ(25) ಮೃತರು. ಬುಧವಾರ ಬೆಳಗ್ಗೆ ಮನೆಯ ಮಹಡಿಯಿಂದ ಇಲಿ ದಿಢೀರ್ ಎಂದು ಮೈಮೇಲೆ ಬಿದ್ದಿದೆ. ಇಲಿ ಗಾಬರಿಯಾಗಿ ಇವರನ್ನು ಕಚ್ಚಿದೆ.
ಇದರಿಂದ ಭಯಗೊಂಡ ಶಕುಂತಲಾ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನೆ ಮಾಡುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.