ವಿಶ್ವನಾಥ್ ಮಗ ಜಿಪಂ ಸದಸ್ಯ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ? | ಜನತಾ ನ್ಯೂಸ್
ಬೆಂಗಳೂರು : ನಾವು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದೇವೆ. JDS ಪಕ್ಷ ಹೋರಾಟ ಮಾಡ್ತಿರುವುದು ಅಧಿಕಾರಕ್ಕೆ ಅಲ್ಲ. ನಿಮ್ಮ ಗೌರವಯುತ ಬದುಕು, ನಾಡಿನ ಸಮಸ್ಯೆ ಬಗೆಹರಿಸಲು ನಾವು ಪ್ರಾಮಾಣಿಕವಾಗಿ ಹೋರಾಡುತ್ತೇವೆ. ಅದಕ್ಕಾಗಿ 2023ರಲ್ಲಿ ಅಧಿಕಾರಕ್ಕೆ ಹೋರಾಟ ಮಾಡ್ತಿದ್ದೇವೆ ಎಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ H.D. ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಜೆಡಿಎಸ್ ಕುಟುಂಬ ರಾಕ್ಷಸ ರಾಜಕಾರಣ ಬಿಜೆಪಿಯಲ್ಲೂ ಇದೆ ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ಹೇಳಿದ್ದರು.
ಜೆಡಿಎಸ್ನಲ್ಲಿ ಕುಟುಂಬ ರಾಜಕೀಯ ಇದೆ ಅನ್ನೋದು ನಮ್ಮ ಪಕ್ಷದ ಅಭ್ಯರ್ಥಿ ಆಗುವ ಮೊದಲು ಎಚ್. ವಿಶ್ವನಾಥ್ಗೆ ಗೊತ್ತಿರಲಿಲ್ವ. ಇಡೀ ಜೆಡಿಎಸ್ ಪಕ್ಷ ದೇವೇಗೌಡರ ಕುಟುಂಬ. ವಿಶ್ವನಾಥ್ ಮಗ ಜಿಪಂ ಸದಸ್ಯ ಅಲ್ಲವೇ? ಡಿಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲವೇ? ಅದು ಕುಟುಂಬ ರಾಜಕೀಯ ಅಲ್ಲವೇ? ಇಡೀ ರಾಜ್ಯದಲ್ಲಿ ಯಾರೊಬ್ಬರಿಗೂ ಜೆಡಿಎಸ್ ಅನ್ನು ಕುಟುಂಬ ರಾಜಕಾರಣ ಎಂದು ಹೇಳುವ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ವಿಶ್ವನಾಥ್ಗೆ ಯಾವ ಪಕ್ಷದಲ್ಲೂ ಇರೋಕೆ ಆಗಲ್ಲ. ಅವರಿಗೆ ಬೇಕಿರೋದು ಅಧಿಕಾರ ಮತ್ತು ಹಣ. ಅವರೆಡೂ ಸಿಗದಿದ್ದಾಗ ಎಲ್ಲರನ್ನೂ ಬೈಯುತ್ತಾ ಓಡಾಡುತ್ತಾರೆ. ನರಿಗೆ ದ್ರಾಕ್ಷಿ ಎಟಕದೇ ಇರುವಾಗ ಹುಳಿ ಎನ್ನುವುದಿಲ್ಲವೇ. ಅಂತಹ ಜಾಯಮಾನಕ್ಕೆ ಸೇರಿದವರು ವಿಶ್ವನಾಥ್. ರಾಕ್ಷಸಿ ಸರ್ಕಾರ ಎಂದಾಗ ಯಡಿಯೂರಪ್ಪ ಅವರಿಗೆ ವಯಸ್ಸು ಆಗಿದೆ ಅನ್ನೋದು ಅವರಿಗೆ ಗೊತ್ತಿರಲಿಲ್ವ ಎಂದರು.