ನಾಲ್ವರು ಶ್ರೀಗಂಧ ಕಳ್ಳರ ಬಂಧನ: 25 ಲಕ್ಷ ಮೌಲ್ಯದ ಶ್ರೀಗಂಧ ವಶ | ಜನತಾ ನ್ಯೂಸ್
ಧಾರವಾಡ : ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಾಲ್ವರು ಶ್ರೀಗಂಧ ಕಳ್ಳರನ್ನು ಬಂಧಿಸಿದ್ದಾರೆ. ಶ್ರೀಗಂಧದ ಮರ ಕಡಿದು ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಚಿಕ್ಕಮಗಳೂರಿನ ಗುರುಮೂರ್ತಿ, ಗದಗನ ಮುದಕಪ್ಪ ಪುಜೇರ್.ಹಿರಿಯಪ್ಪ ಹಿರೇಮನಿ ಹಾಗೂ ಹಾವೇರಿಯ ಭೀಮಪ್ಪ ಸುಣಗಾರ ಎಂದು ಗುರುತಿಸಲಾಗಿದೆ. ಅಂದಾಜು 25 ಲಕ್ಷ ರೂ. ಮೌಲ್ಯದ 250 ಕೆ.ಜಿ. ಶ್ರೀಗಂದವನ್ನು ವಾಹನವೊಂದರ ಮೂಲಕ ಆಂದ್ರ ಪ್ರದೇಶಕ್ಕೆ ಸಾಗಾಣಿಕೆ ಮಾಡುತ್ತಿರುವಾಗ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ 250 ಕೆಜಿ 25 ಲಕ್ಷ ರೂ ಮೌಲ್ಯದ ಶ್ರೀಗಂಧ, ಪಲ್ಸರ್ ಬೈಕ್ ಹಾಗೂ ಅಲ್ಟೋ ಕಾರ ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
English summary :Dharwad