ಅಲೆಮಾರಿ ಕುಟುಂಬಗಳ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ
ಭಟ್ಕಳ :
ಭಟ್ಕಳ ತಾಲೂಕಿನ ಮುರ್ಡೇಶ್ವರದ ರಾಷ್ಟ್ರಿಯ ಹೆದ್ದಾರಿ 66 ರ ಪಕ್ಕದಲ್ಲಿ ಮಣಿಹಾರ ಮಾರುವ ವೃತ್ತಿಯಲ್ಲಿ ನಿರತರಾಗಿದ್ದ ಅಲೆಮಾರಿ ಕುಟುಂಬಗಳ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಪೌಷ್ಠಿಕ ಆಹಾರ ವಿತರಿಸಲಾಯಿತು.
ತಾಲೂಕಿನ ಮುರುಡೇಶ್ವರ ವಲಯ ಅಂಗನವಾಡಿ ಮೇಲ್ವಿಚಾರಕಿ ಶ್ವೇತಾ ಭೋಮಕರ, ಗುಮ್ನಹಕ್ಲು ಅಂಗನವಾಡಿ ಕಾರ್ಯಕರ್ತೆ ಸುಜಾತ ನಾಯ್ಕ ಹಾಗೂ ಆಶಾ ಕಾರ್ಯಕರ್ತೆ ಸುಮನ್ ನಾಯ್ಕರವರು ಅಲೆಮಾರಿ ಕುಟುಂಬಗಳು ತಾತ್ಕಾಲಿಕವಾಗಿ ನಿರ್ಮಿಸಿರುವ ಬಿಡಾರಕ್ಕೆ ತೆರಳಿ ಅಂಗನವಾಡಿ ಪೂರಕ ಪೌಷ್ಠಿಕಾಂಶ ಆಹಾರ ಪದಾರ್ಥಗಳನ್ನು ವಿತರಿಸಿದರು.
ಹಾಲಿನ ಪೌಡರ, ಮಿಶ್ರಿತ ಹಿಟ್ಟು, ವಟಾಣೆ ಕಾಳು, ಬಿಸ್ಕೆಟ್, ಹಾಲು ಮತ್ತು ಚಕ್ಕೆಗಳನ್ನು ನೀಡಿ ತಾಯಂದಿರುಗಳಿಗೆ ಪೌಷ್ಠಕಾಂಶ ಪದಾರ್ಥಗಳ ಮಹತ್ವ ಹಾಗೂ ಮಾಲ್ಟ್ ಮತ್ತು ಹಾಲು ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟರು. ಜೊತೆಗೆ ರಾಷ್ಟ್ರಿಯ ಜಂತು ಹುಳ ನಿವಾರಣಾ ಕಾರ್ಯಕ್ರಮದ ಅಂಗವಾಗಿ ಎಲ್ಲಾ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಗಳನ್ನು ವಿತರಿಸಲಾಯಿತು.