ನನ್ನ ತಪ್ಪಿದ್ದರೆ ಜನ ಬುದ್ಧಿ ಕಲಿಸಲಿ ತಿದ್ಕೊತೀನಿ, ನಾನು ಸಿದ್ಧಳಾಗಿದ್ದೇನೆ: ಸುಮಲತಾ ಅಂಬರೀಷ್ | ಜನತಾ ನ್ಯೂಸ್
ಮಂಡ್ಯ: : ಇಂದು ಮಂಡ್ಯದಲ್ಲಿ ಮನ್ಮುಲ್ ಹಗರಣ ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿ ರೈತ ಸಂಘಟನೆ ಹಾಗೂ ಹಾಲು ಉತ್ಪಾದಕರ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಸುಮಲತಾ ಮಾತನಾಡಿದ್ದಾರೆ.
ಚುನಾವಣಾ ವೇಳೆ ನಾನು ಹೋದಲ್ಲೆಲ್ಲಾ ಅಕ್ರಮ ಗಣಿಗಾರಿಕೆ ವಿರುದ್ಧ ದನಿ ಎತ್ತುವಂತೆ ರೈತರು ಕೇಳಿಕೊಂಡಿದ್ದರು. ಹೀಗಾಗಿ ಕಾವೇರಿ ನೀರಿನ ಸಮಸ್ಯೆ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ನಾನು ಸಂಸತ್ನಲ್ಲಿ ಮಾತನಾಡಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಅವರು ಹೇಳಿದರು.
ನಾನು ಹೋದ ಕಡೆ ಎಲ್ಲ ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಬೇಕು ಅಂತಾ ಹೇಳಿದ್ರೂ. ಆ ಪ್ರಕಾರ ಧ್ವನಿ ಎತ್ತಿ ಅವರಿಗೆ ನೆರವಾಗಿದ್ದೇನೆ ಆದರೂ ಮಾತು ಮಾತಿಗೂ ಜನ ಬುದ್ದಿ ಕಲಿಸ್ತಾರೆ, ಬುದ್ದಿ ಕಲಿಸ್ತಾರೆ ಅಂತಾರೇ.. ಆಯ್ತು ನನ್ನ ತಪ್ಪು ಇದ್ದರೆ ಜನ ಅವಶ್ಯವಾಗಿ ಬುದ್ದಿ ಕಲಿಸಲಿ ಎಂದಿದ್ದಾರೆ.
ನಾನು ಈ ಮಣ್ಣಿನ ಸೊಸೆ ನನಗೆ ಈ ಮಣ್ಣಿನ ಮೇಲೆ ಅಧಿಕಾರ ಇದೆ, ನಿಮಗೆ ನಾನು ಬೇಡ ಎನಿಸಿದಾಗ ಹೇಳಿ ಟಾಟಾ ಹೇಳಿ ಹೋಗ್ತೀನಿ, ತಪ್ಪಿದ್ದರೇ ಹೇಳಿ ತಿದ್ದಿಕೊಳ್ತೀನಿ. ನಾನು ಪಾರ್ಲಿಮೆಂಟ್ನಲ್ಲಿದ್ದಾಗ ಸುಮಲತಾ ಎಲ್ಲಿ ಕಾಣ್ತಿಲ್ಲಾ ಅಂತಾರೆ..ಇಲ್ಲಿ ಬಂದರೇ ನನ್ನ ವಿರುದ್ಧ ಟೀಕೆ ಮಾಡ್ತಾರೆ, ಹಾಗಾದರೆ ನಾನು ಎಲ್ಲಿಗೆ ಹೋಗಬೇಕು.?ಎಂದು ಸಂಸದೆ ಸುಮಲತಾ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಇವತ್ತು ಸುಮಲತಾ ಏನೇ ಮಾತನಾಡಿದರೂ ರಾಜಕೀಯ ಬಣ್ಣ ಕೊಡುವ ಕೆಲಸ ಆಗುತ್ತಿದೆ. ಅದರ ಬಗ್ಗೆ ನನಗೇನು ಬೇಜಾರು ಇಲ್ಲ. ಅವರ ಒಂದೆರೆಡು ಮಾತಲ್ಲಿ ನಿಜ ಒದೆ ಒಪ್ಪಿಕೊಳ್ಳೋಣ. ಸುಮಲತಾಗೆ ರಾಜಕೀಯ ಹೊಸದು, ಮಾಹಿತಿ ಕೊರತೆ ಇದೆ ಎನ್ನುತ್ತಾರೆ. ನಿಜ ನನಗೆ ರಾಜಕೀಯ ಹೊಸದೇ ಹಾಗೆಯೇ ಭ್ರಷ್ಟಾಚಾರನೂ ಕೂಡ ಹೊಸದೇ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.