ಸಪ್ತಪದಿ ತುಳಿದ ನಿರ್ದೇಶಕ ಸಂತೋಷ್ ಆನಂದರಾಮ್
ಬೆಂಗಳೂರು : ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಸಂತೋಷ್ ಆನಂದರಾಮ್ ಇಂದು ಸಪ್ತಪದಿ ತುಳಿದಿದ್ದಾರೆ. ರೀಲ್ ನಲ್ಲಿ ಸುಂದರ ಪ್ರಪಂಚವನ್ನೇ ಸೃಷ್ಟಿಸುವ ನಿರ್ದೇಶಕ ಸಂತೋಷ ಆನಂದರಾಮ್ ಇಂದು ತಮ್ಮ ರಿಯಲ್ ಲೈಫ್ ನ್ನು ಸಹ ಸುಂದರಗೊಳಿಸುವ ನಿಟ್ಟಿನಲ್ಲಿ, ಸಂಗಾತಿಯಾದ ಸುರಭಿಯೊಂದಿಗೆ ಇಂದು ಸಪ್ತಪದಿ ತುಳಿದರು. Mr. & Mrs ರಾಮಾಚಾರಿ, ರಾಜಕುಮಾರಗಳಂತಹ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡಿದ ಸ್ಟಾರ್ ನಿರ್ದೇಶಕ ಸಂತೋಷ್ ಆನಂದರಾಮ್ ಅವರ ಜೀವನದ ಈ ಅದ್ಭುತ ಕ್ಷಣಗಳಿಗೆ ಚಿತ್ರರಂಗದ ಅನೇಕ ದಿಗ್ಗಜರು ಸಾಕ್ಷಿಯಾದರು.
ನಿನ್ನೆ ಸಂಜೆ 7ಕ್ಕೆ ಆರತಕ್ಷತೆ ನೆರವೇರಿದ್ದು, ಪವರ್ ಸ್ಟಾರ್ ಪುನಿತ್ ರಾಜಕುಮಾರ, ಯುವರಾಜ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು, ಆಪ್ತರು ವಧು-ವರರಿಗೆ ಶುಭಕೋರಿದ್ದರು. ಕಳೆದ ವರ್ಷ ನವೆಂಬರ್ ನಲ್ಲಿ ಸಂತೋಷರವರ ಮದುವೆಯ ನಿಶ್ಚಿತಾರ್ತ ನೆರವೇರಿತ್ತು. ಸುರಭಿ ಹತ್ವಾರ್ ಅವರೊಂದಿಗೆ ಸಪ್ತಪದಿ ತುಳಿಯಲು ಇಂದು ಬೆಳಿಗ್ಗೆ 11:30ಕ್ಕೆ ಮುಹೂರ್ತ ನಿಗದಿಪಡಿಸಲಾಗಿತ್ತು. ಮದುವೆಗೆ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ತಾರಾ, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಾಗಿ Mr.& Mrs.ಸಂತೋಷ್ ಆನಂದರಾಮ್ ಗೆ ಶುಭಕೋರಿದರು.