ಭಾರಿ ಮಳೆಗೆ ಹಳಿ ಮೇಲೆ ನಿಂತ ನೀರು: ತಾಳಗುಪ್ಪ-ಮೈಸೂರು ರೈಲು ಸಂಚಾರ ಸ್ಥಗಿತ | ಜನತಾ ನ್ಯೂಸ್
ಶಿವಮೊಗ್ಗ : ಶಿವಮೊಗ್ಗದಲ್ಲಿ ಕೂಡ ಧಾರಾಕಾರ ಮಳೆಯಾಗುತ್ತಿದ್ದು ರೈಲು ಹಳಿಗಳು ಸಂಪೂರ್ಣ ಜಲಾವೃತಗೊಂಡಿದೆ. ತಾಳಗುಪ್ಪದಿಂದ ಮೈಸೂರು ಮಾರ್ಗವಾಗಿ ಇರುವ ರೈಲಿನ ಹಳಿಗಳು ಸಾಗರದ ಅನೇಕ ಕಡೆಯಲ್ಲಿ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ತಾಳಗುಪ್ಪ-ಮೈಸೂರು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಕಾನ್ಲೆ ಎಂಬಲ್ಲಿ ರೈಲು ಹಳಿ ಜಲಾವೃತಗೊಂಡಿದೆ. ತಾಳಗುಪ್ಪದಿಂದ 4 ಕಿಮಿ ದೂರದಲ್ಲಿ ಕಾನ್ಲೆ ಎಂಬಲ್ಲಿ ರೈಲ್ವೆ ಅಳಿಯ ಮಟ್ಟಕ್ಕೆ ನೀರು ನಿಂತಿರುವ ಕಾರಣ, ರೈಲು ಇಂದು ತಾಳಗುಪ್ಪ ನಿಲ್ದಾಣದಿಂದ ಚಲಿಸುತ್ತಿಲ್ಲ. ರಾತ್ರಿ 8-20 ರ ರೈಲು, ಮಳೆ ಕಡಿಮೆಯಾದರೆ ಸಂಚರಿಸಲಿದ್ದು, ಒಂದು ವೇಳೆ ಮಳೆ ಕಡಿಮೆಯಾಗದಿದ್ದರೆ ಸಾಗರದಿಂದಲೇ ಚಲಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
English summary :Shivamogga