ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ತಮ್ಮ ನೆಚ್ಚಿನ ನಾಯಿಯ ಅಂತ್ಯಸಂಸ್ಕಾರದ ವೇಳೆ ನಾಯಿಯ ಕಳೆಬರಹವನ್ನು ಮುದ್ದಾಡಿ, ಬಳಿಕ ಕಣ್ಣಿರು ಒರೆಸಿಕೊಳ್ಳುತ್ತಿರುವ ವೀಡಿಯೊ ಒಂದು ಈಗ ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ಸನ್ನಿವೇಶ, ಕೆಲವು ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ಮುಖ್ಯಮಂತ್ರಿ ಅವರ ನೆಚ್ಚಿನ ನಾಯಿ ಸತ್ತಾಗ, ಅವರ ಇಡೀ ಕುಟುಂಬವೇ ದುಃಖದಲ್ಲಿ ಮುಳುಗಿದ್ದು, ಸಾರ್ವಜನಿಕವಾಗಿ ಕಣ್ಣಿರಬಾಷ್ಪ ಸುರಿಸಿತ್ತು ಎನ್ನಲಾಗಿದೆ. ಸಾಕುನಾಯಿಯ ಅದರಲ್ಲೂ ಪ್ರಾಣಿಗಳ ಜೀವಕ್ಕೆ ಇಷ್ಟೊಂದು ಮನಃ ಮಿಡಿಯುವ ಮುಖ್ಯಮಂತ್ರಿ ಮೃದು ಮನಸ್ಸಿಗೆ ಸಾರ್ವಜನಿಕವಾಗಿ ಶ್ಲಾಘನೆ ವ್ಯಕ್ತವಾಗಿದೆ.
ವಿರೋಧ ಪಕ್ಷ ಕಾಂಗ್ರೆಸ್ ನ ಮಾಜಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮ ಸಿಎಂ ಶ್ರೀ ಬಸವರಾಜ್ ಬೊಮ್ಮಾಯಿಯವರ ಈ ಮಾನವೀಯ ಭಾಗವನ್ನು ನೋಡಲು ನಿಜವಾಗಿಯೂ ಸಂತೋಷವಾಗಿದೆ. ಎಲ್ಲರನ್ನೂ ಸಮಾನವಾಗಿ ಪರಿಗಣಿಸುವ ಮತ್ತು ದುರ್ಬಲರಲ್ಲಿ ದುರ್ಬಲರನ್ನು ಕಾಳಜಿ ವಹಿಸುವ ಆಡಳಿತವನ್ನು ನೀಡಲು ಇದೇ ರೀತಿಯ ಪ್ರೀತಿ ಮತ್ತು ವಾತ್ಸಲ್ಯವು ಅವರಿಗೆ ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ, ಎಂದು ಆಶಯ ವ್ಯಕ್ತಪಡಿಸಿದ್ದಾರೆ.