ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : ₹6 ಕೋಟಿ ಮೌಲ್ಯದ ರಕ್ತಚಂದನ ವಶ | ಜನತಾ ನ್ಯೂಸ್
ಬೆಂಗಳೂರು : ಅಕ್ರಮವಾಗಿ ಸರಕು ಸಾಗಾಣಿಕೆಯ ಮೂಲಕ ವಿದೇಶಕ್ಕೆ ರಪ್ತು ಮಾಡಲು ಯತ್ನಿಸಿದ ರಕ್ತ ಚಂದನವನ್ನ ಬಿಐಎಎಲ್ ಏರ್ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಮೂಲಕ ದುಬೈಗೆ ಕೋಟಿ ಕೋಟಿ ಬೆಲೆ ಬಾಳುವ ರಕ್ತ ಚಂದನವನ್ನ ಕೆಲವರು ಪೈಪುಗಳೆಂದು ಹೇಳಿಕೊಂಡು ಪಾರ್ಸಲ್ ಮಾಡಿದ್ದಾರೆ.
ಆದರೆ ಪಾರ್ಸಲ್ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಪಾರ್ಸಲ್ ಅನ್ನ ಒಪನ್ ಮಾಡಿ ನೋಡಿದಾಗ ಅದರಲ್ಲಿ ಆರು ಕೋಟಿಗೂ ಅಧಿಕ ಮೌಲ್ಯದ ರಕ್ತ ಚಂದನವನ್ನ ಪಾರ್ಸಲ್ ಮಾಡ್ತಿರೂದು ಬೆಳಕಿಗೆ ಬಂದಿದೆ.
ಸುಮಾರು ಆರು ಕೋಟಿ ಮೌಲ್ಯದ ರಕ್ತಚಂದನವನ್ನು ಸ್ಥಳೀಯ ಹೊಸಕೋಟೆ ಬಳಿಯ ಸರಕು-ಸಾಗಾಣಿಕೆ ಕಂಪೆನಿಯೊಂದು ಸಾಗಾಣಿಕೆಯ ಉಸ್ತುವಾರಿ ಹೊತ್ತಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಪಾರ್ಸಲ್ ನಲ್ಲಿದ್ದ ರಕ್ತ ಚಂದನದ ತುಂಡುಗಳನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು,ಯಾರು ಅಕ್ರಮವಾಗಿ ನಿಷೇಧಿತ ರಕ್ತ ಚಂದನ ರವಾನೆ ಮಾಡುತ್ತಿದ್ದರು ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.