ಸರಗಳ್ಳತನಕ್ಕೆ ಇಳಿದಿದ್ದ ಎಂಬಿಎ ಪದವೀಧರ! | ಜನತಾ ನ್ಯೂಸ್
ಬೆಂಗಳೂರು : ಎಂಬಿಎ ಪಧವೀದರನಾದರೂ ಕೆಲಸವಿಲ್ಲದ ಕಾರಣ ಸರಗಳ್ಳತನಕ್ಕೆ ಇಳಿದಿದ್ದಾನೆ. ಜಯನಗರದ ಪೂರ್ಣಿಮಾ ಕನ್ವೆನ್ಷನ್ ಹಾಲ್ನಿಂದ ಬರುತ್ತಿದ್ದ ಮಹಿಳೆಯ ಸರ ಎಗರಿಸಿದ ಶೇಖ್ ಗೌಸ್ನನ್ನು ಪೊಲೀಸರು ಬಂಧಿಸಿದ್ದಾರೆ.
ಶೇಖ್ ಗೌಸ್ ಬಾಷಾ ಬಂಧಿತ ಆರೋಪಿ. ಇತ ಖಾಸಗಿ ಕಂಪನಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ, ಆದರೆ, ಲಾಕ್ಡೌನ್ ಎಫೆಕ್ಟ್ನಿಂದ ಕೆಲಸ ಕಳೆದುಕೊಂಡಿದ್ದ. ಸಾಲಗಾರರ ಕಿರುಕುಳ ಹೆಚ್ಚಾಗಿ ಸರಗಳ್ಳತನಕ್ಕೆ ಮುಂದಾಗಿದ್ದೇನೆ ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾನೆ... ಬೇರೆಡೆ ಕೆಲಸಕ್ಕೆ ಟ್ರೈ ಮಾಡಿದರೂ ಸಿಗಲಿಲ್ಲ. ಕೊನೆಗೆ ಸರಗಳ್ಳತನಕ್ಕೆ ಮುಂದಾದೆ… ಎಂದು ಆರೋಪಿ ಹೇಳಿದ್ದಾನೆ.
English summary :Bangalore