ಖೇಲ್ ರತ್ನ ಪ್ರಶಸ್ತಿಯನ್ನು, ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಯಾಗಿ ಮರುನಾಮಕರಣ - ಪ್ರಧಾನಿ ಮೋದಿ | ಜನತಾ ನ್ಯೂಸ್
ನವದೆಹಲಿ : ದೇಶದಲ್ಲಿ ಇನ್ನೂ ಮುಂದೆ ದೇಶದಲ್ಲಿ ಶ್ರೇಷ್ಠ ಆಟಗಾರನ ಹೆಸರಿನ ಪ್ರಶಸ್ತಿಯನ್ನು, ಬೇರೆ ಶ್ರೇಷ್ಠ ಆಟಗಾರರು ಪ್ರಶಸ್ತಿಯಾಗಿ ಸ್ವೀಕಾರ ಮಾಡಲಿದ್ದಾರೆ.
ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಕರೆಯಲ್ಪಡುತ್ತಿದ್ದ, ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಪ್ರಶಸ್ತಿಯನ್ನು, ಇಂದು ಶುಕ್ರವಾರ "ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ" ಎಂದು ಮರುನಾಮಕರಣ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಇಂದು ಘೋಷಿಸಿದ್ದಾರೆ. ಮರುನಾಮಕರಣವು ಸರ್ವಶ್ರೇಷ್ಠ ಹಾಕಿ ನಾಯಕ ಮತ್ತು ಕ್ರೀಡೆಯ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಗೌರವಾರ್ಥವಾಗಿದೆ. ರಾಷ್ಟ್ರದಾದ್ಯಂತದ ಹಲವಾರು ಮನವಿಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
"ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಅವರ ಹೆಸರಿಡಲು ನಾನು ಭಾರತದಾದ್ಯಂತ ನಾಗರಿಕರಿಂದ ಅನೇಕ ಮನವಿಗಳನ್ನು ಪಡೆಯುತ್ತಿದ್ದೇನೆ. ಅವರ ಅಭಿಪ್ರಾಯಗಳಿಗಾಗಿ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ."
"ಅವರ ಭಾವನೆಯನ್ನು ಗೌರವಿಸಿ, ಈ ಮೂಲಕ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತದೆ!" #ಜೈಹಿಂದ್ ಜೊತೆ ಪ್ರಧಾನ ಮಂತ್ರಿ ಟ್ವೀಟ್ ಮಾಡಿದ್ದಾರೆ.
ಒಲಂಪಿಕ್ಸ್2020ನಲ್ಲಿ ಭಾರತದ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ತಮ್ಮ ಪ್ರದರ್ಶನದಿಂದ ರಾಷ್ಟ್ರದ ಕಲ್ಪನೆಯನ್ನು ಸೆರೆಹಿಡಿದಿರುವ ಸಮಯದಲ್ಲಿ ಈ ಬದಲಾವಣೆ ಬಂದಿದೆ.
ಪುರುಷರು ಮತ್ತು ಮಹಿಳೆಯರ ಹಾಕಿ ತಂಡದ ಅಸಾಧಾರಣ ಪ್ರದರ್ಶನವು ನಮ್ಮ ಇಡೀ ರಾಷ್ಟ್ರದ ಕಲ್ಪನೆಯನ್ನು ಸೆರೆಹಿಡಿದಿದೆ. ಭಾರತದ ಉದ್ದ ಮತ್ತು ಅಗಲದಲ್ಲಿ ಹೊರಹೊಮ್ಮುತ್ತಿರುವ ಹಾಕಿಯ ಕಡೆಗೆ ಹೊಸ ಆಸಕ್ತಿ ಇದೆ. ಮುಂಬರುವ ಸಮಯಕ್ಕೆ ಇದು ಅತ್ಯಂತ ಧನಾತ್ಮಕ ಸಂಕೇತವಾಗಿದೆ, ಎಂದು ಪ್ರಧಾನಿ ಮೋದಿ ಈ ಘೋಷಣೆಗೂ ಮುಂಚೆ ಹೇಳಿದ್ದಾರೆ.
ನಿನ್ನೆ, ಪುರುಷರ ಹಾಕಿ ತಂಡವು 41 ವರ್ಷಗಳ ನಿರಂತರ ಪರಿಶ್ರಮದ ನಂತರ ಬಹುನಿರೀಕ್ಷಿತ ಒಲಂಪಿಕ್ಸ್ ಪದಕವಾಗಿ ಕಂಚು ಪದಕ ಗೆದ್ದಿತು. ಮಹಿಳಾ ಹಾಕಿ ತಂಡವು ಇಂದು ಒಲಿಂಪಿಕ್ಸ್ನಲ್ಲಿ ತನ್ನ ಉತ್ಸಾಹಭರಿತ ಪ್ರದರ್ಶನದಲ್ಲಿ ಕಂಚಿನ ಪದಕ ಗಳಿಸುವ ಅವಕಾಶವನ್ನು ಸ್ವಲ್ಪದರಲ್ಲಿ ಕಳೆದುಕೊಂಡಿತು.