ಒಲಂಪಿಕ್ಸ್ ಗೂ ಮುನ್ನ- ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಮತ್ತೊಂದು ಆಟಗಾರರಿಗೆ ಪ್ರಧಾನಿ ಮೋದಿ ಮಧ್ಯಸ್ಥಿಕೆಯಿಂದ ಸಹಾಯ | ಜನತಾ ನ್ಯೂಸ್
ಬೆಂಗಳೂರು : ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಮುನ್ನ ಇಬ್ಬರು ಕ್ರೀಡಾಪಟುಗಳಿಗೆ ಅಮೆರಿಕದಲ್ಲಿ ಉತ್ತಮ ವೈದ್ಯಕೀಯ ಆರೈಕೆ ಮತ್ತು ತರಬೇತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಸ್ವತಃ ಮಧ್ಯಸ್ಥಿಕೆ ವಹಿಸಿದ್ದರು, ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಬಹಿರಂಗಪಡಿಸಿದ್ದಾರೆ.
ಮಣಿಪುರ ಮುಖ್ಯಮಂತ್ರಿ, ತಾವು ಈ ವಾರ ಪ್ರಧಾನಿಯನ್ನು ಭೇಟಿಯಾದಾಗ, ಭಾರತೀಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿರುವುದಾಗಿ, ಎಏನ್ಐಗೆ ತಿಳಿಸಿದ್ದಾರೆ.
ಚಾನು ಅವರು ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಹಿಳೆಯರ 49ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಭಾರತೀಯ ವೇಟ್ ಲಿಫ್ಟರ್ ಟೋಕಿಯೋದಿಂದ ಹಿಂತಿರುಗಿದ ಬಳಿಕ ಕಳೆದ ವಾರ ಇಂಫಾಲ್ನಲ್ಲಿ ಅದ್ಭುತ ಸ್ವಾಗತವನ್ನು ಪಡೆದಿದ್ದರು.
ನಂತರ, ಚಾನು ಅವರನ್ನು ಅಭಿನಂದಿಸಲು ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ, ಚಾನು ಅವರು, ಪ್ರಧಾನ ಮಂತ್ರಿ ಕಚೇರಿಯಿಂದ ಆಕೆ ಪಡೆದ ಸಹಾಯದ ಬಗ್ಗೆ ಹೇಳಿದ್ದನ್ನು, ಸಿಎಂ ಸಿಂಗ್ ವಿವರಿಸಿದರು.
"ಪ್ರಧಾನಮಂತ್ರಿಯವರಿಂದ ಪಡೆದ ಸಹಾಯದ ಬಗ್ಗೆ ಅವರ(ಮೀರಾಬಾಯಿ) ಬಹಿರಂಗಪಡಿಸುವಿಕೆಯಿಂದ ನನಗೆ ಆಶ್ಚರ್ಯವಾಯಿತು. ಆಕೆಯ ಸ್ನಾಯುವಿನ ಶಸ್ತ್ರಚಿಕಿತ್ಸೆ ಮತ್ತು ಅಭ್ಯಾಸಕ್ಕಾಗಿ ಯುಎಸ್ಗೆ ಹೋಗಲು ಅವಕಾಶವನ್ನು ನೀಡದಿದ್ದರೆ, ಅವಳು ಈ ಗುರಿ ಸಾಧಿಸಲು ಸಾಧ್ಯವಿಲ್ಲ, ಎಂದು ಅವಳು ಬಹಿರಂಗಪಡಿಸಿದಳು. ಪ್ರಧಾನಿ ಮೋದಿ ತನಗೆ ಹೇಗೆ ನೇರವಾಗಿ ಸಹಾಯ ಮಾಡಿದರು ಎಂಬುದನ್ನು ಅವರು(ಚಾನು) ವಿವರಿಸಿದರು. ಪ್ರಧಾನಮಂತ್ರಿ ಕ್ರೀಡಾಪಟುವಿಗೆ ಸಹಾಯ ಮಾಡಿದರು ಮತ್ತು ಸಮಸ್ಯೆಯನ್ನು ಸೂಕ್ಷ್ಮವಾಗಿ ನಿರ್ವಹಿಸಿದರು. ಮಣಿಪುರದ ಜನರು ಪ್ರಧಾನಿ ಮೋದಿ ಯವರು, ಚಾನು ಅವರಿಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ತಿಳಿದು ಸಂತೋಷಪಟ್ಟರು, ಎಂದು ಸಿಂಗ್ ಹೇಳಿದರು.
ಇತ್ತೀಚೆಗೆ ಭೇಟಿಯಾದಾಗ ಸಿಂಗ್ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ. "ಚಾನುಗೆ ಸಹಾಯ ಮಾಡಿದ್ದಕ್ಕಾಗಿ ನಾನು ಧನ್ಯವಾದ ಹೇಳಿದಾಗ ಪ್ರಧಾನಿ ಮೋದಿ ನಗುತ್ತಲೇ ಇದ್ದರು. ಅವರು ಇನ್ನೂ ಮತ್ತೊಬ್ಬ ಕ್ರೀಡಾಪಟುವಿಗೆ ಸಹಾಯ ಮಾಡಿದ್ದಾರೆ. ಇದು ನಾಯಕನ ಹಿರಿಮೆ" ಎಂದು ಸಿಂಗ್ ಹೇಳಿದರು.
"ಚಾನುಗೆ ಬೆನ್ನು ನೋವು ಕಾಣಿಸಿಕೊಂಡಿತ್ತು ಮತ್ತು ಈ ಸಂದೇಶವು ಪಿಎಂಒಗೆ ಹೋಯಿತು ಮತ್ತು ಪಿಎಂ ಮೋದಿ ನೇರವಾಗಿ ಮಧ್ಯಪ್ರವೇಶಿಸಿದರು ಮತ್ತು ಆಕೆಯ ಚಿಕಿತ್ಸೆ ಮತ್ತು ವಿದೇಶದಲ್ಲಿ ತರಬೇತಿಯ ಎಲ್ಲಾ ಖರ್ಚುಗಳನ್ನು ಪಿಎಂ ನೋಡಿಕೊಳ್ಳುತ್ತಾರೆ" ಎಂದು ಸಿಂಗ್ ಹೇಳಿದರು.
"ಪ್ರಧಾನಿ ಮೋದಿ ಸಹಾಯ ಮಾಡಿದ ಏಕೈಕ ವ್ಯಕ್ತಿ ಅವಳು ಅಲ್ಲ ಎಂದು ನನಗೆ ಹೇಳಲಾಗಿದೆ. ಮತ್ತು ಪ್ರಧಾನಿ ಅದನ್ನು ಎಲ್ಲಿಯೂ ಕೂಡ ಉಲ್ಲೇಖಿಸಿಲ್ಲ. ನಾನು ಹೆಸರು ಹೇಳುವುದಿಲ್ಲ, ಆದರೆ ಪ್ರಧಾನಿ ಮೋದಿ ಅಮೆರಿಕಕ್ಕೆ ವೈದ್ಯಕೀಯ ಆರೈಕೆಗಾಗಿ ಮತ್ತು ತರಬೇತಿಗಾಗಿ ಕಳುಹಿಸಿದ ಇನ್ನೊಬ್ಬ ಕ್ರೀಡಾಪಟು ಇದ್ದಾರೆ. ಭಾರತೀಯರಾಗಿರುವ ನಾವು ಪ್ರಧಾನಿ ಮೋದಿಯವರ ಅಡಿಯಲ್ಲಿ ತುಂಬಾ ಹೆಮ್ಮೆ ಪಡುತ್ತೇವೆ", ಎಂದು ಮಣಿಪುರದ ಮುಖ್ಯಮಂತ್ರಿ ಹೇಳಿದರು.