ಚೀನಾ ಎದುರು ಭಾರತಕ್ಕೆ ಭರ್ಜರಿ ಜಯ : ಆರ್ಇಸಿಎಎಪಿ ಚುನಾವಣೆ- ಮೋದಿ ಸರ್ಕಾರಕ್ಕೆ ಹೆಚ್ಚಿದ ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲ | ಜನತಾ ನ್ಯೂಸ್
ನವದೆಹಲಿ : ಭಾರತೀಯ ಕೋಸ್ಟ್ ಗಾರ್ಡ್ ಮಹಾನಿರ್ದೇಶಕ ಕೆ.ನಟರಾಜನ್ ಅವರು, ಏಷ್ಯಾದಲ್ಲಿ ಹಡಗುಗಳ ವಿರುದ್ಧ ಕಡಲ್ಗಳ್ಳತನ ಮತ್ತು ಸಶಸ್ತ್ರ ದರೋಡೆ ವಿರುದ್ಧದ ಪ್ರಾದೇಶಿಕ ಸಹಕಾರ ಒಪ್ಪಂದ(ಆರ್ಇಸಿಎಎಪಿ)ದ ಮುಂದಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಭಾರತವು ಚೀನಾಕ್ಕೆ ದೊಡ್ಡ ಸೋಲನ್ನು ಉಣಿಸಿದಂತಾಗಿದೆ. ಪ್ರಾದೇಶಿಕ ಸಂಸ್ಥೆಯು ಸಿಂಗಾಪುರದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ.
"ಸಿಂಗಾಪುರದ ಆರ್ಇಸಿಎಎಪಿ ಯ ಮುಂದಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಆಯ್ಕೆಯಾದ ಡಿಜಿ ಕೋಸ್ಟ್ ಗಾರ್ಡ್ ಅವರನ್ನು ಅಭಿನಂದಿಸಿ. ಕಡಲ ಭದ್ರತೆಗೆ ನಮ್ಮ ಕೊಡುಗೆಗೆ ದೊರೆತ ಸೂಕ್ತ ಮನ್ನಣೆ" ಎಂದು ಜೈಶಂಕರ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಆರ್ಇಸಿಎಎಪಿ ಚುನಾವಣೆಯಲ್ಲಿ ಒಟ್ಟು 21 ಸದಸ್ಯ ರಾಷ್ಟ್ರಗಳ ಪೈಕಿ, ಭಾರತೀಯ ಅಭ್ಯರ್ಥಿಯಾದ ಕೆ.ನಟರಾಜನ್ ಅವರು 14 ಮತಗಳನ್ನು ಪಡೆದು ಮೂರರಲ್ಲಿ ಎರಡರಷ್ಟು ಬಹುಮತವನ್ನು ಪಡೆದರು. ಹಾಗೂ ಚೀನಾ ಕೇವಲ 4 ಮತಗಳಿಸಲು ಶಕ್ತವಾಗಿದೆ ಮತ್ತು ಫಿಲಿಪೈನ್ಸ್ 3 ಮತಗಳನ್ನು ಪಡೆದಿದೆ.
ಮತದಾನದ ಪ್ರಾಥಮಿಕ ಮೌಲ್ಯಮಾಪನವು ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಮೋದಿ ಸರ್ಕಾರದ ಜೊತೆ ನಿಂತಿದೆ. ಅಲ್ಲದೇ, ಕ್ವಾಡ್ನ ಸದಸ್ಯರಾದ - ಅಮೇರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ - ಭಾರತಕ್ಕೆ ಮತ ಹಾಕಿವೆ. ಇತರ ಪಾಶ್ಚಿಮಾತ್ಯ ದೇಶಗಳಾದ ಡೆನ್ಮಾರ್ಕ್, ಯುಕೆ, ಜರ್ಮನಿ, ನೆದರ್ಲ್ಯಾಂಡ್ಸ್, ಜರ್ಮನಿ ಮತ್ತು ನಾರ್ವೆ ಕೂಡ ಭಾರತಕ್ಕೆ ಮತ ಹಾಕಿವೆ.
Congratulate DG Coast Guard for his election as the next Executive Director of ReCAAP, Singapore. A fitting recognition of our contribution to maritime security.
— Dr. S. Jaishankar (@DrSJaishankar) August 5, 2021
ಇತರ ಆಗ್ನೇಯ ಏಷ್ಯಾದ ದೇಶಗಳಾದ ಥೈಲ್ಯಾಂಡ್ ಚೀನಾಕ್ಕೆ ಮತ ಹಾಕಿದ್ದು, ಬೀಜಿಂಗ್ ಕೇವಲ ಕಾಂಬೋಡಿಯಾ ಮತ್ತು ಲಾವೋಸ್ ನಂತಹ ಕ್ಲೈಂಟ್ ರಾಜ್ಯಗಳ ಮತ ಗಳಿಸಲು ಶಕ್ತವಾಗಿದೆ.