ನೀರಜ್ ಚೋಪ್ರಾಗೆ ಎಕ್ಸ್ಯುವಿ-700 ಕಾರು ಘೋಷಿಸಿದ ಆನಂದ್ ಮಹಿಂದ್ರಾ : ಹರಿಯಾಣ ಸರ್ಕಾರದಿಂದ 6 ಕೋಟಿ | ಜನತಾ ನ್ಯೂಸ್
ನವದೆಹಲಿ : ಕೋಟ್ಯಾಂತರ ಭಾರತೀಯರ ಬಹುನಿರೀಕ್ಷಿತ ಕನಸನ್ನು ಸಾಕಾರಗೊಳಿಸಿ, ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಜಾವಲಿನ್ ಪಟು ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನ ಗಳಿಸಿದ ಇಡೀ ದೇಶವೇ ಕ್ರೀಡಾಪಟುವನ್ನು ಕೊಂಡಾಡುತ್ತಿದೆ. ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸುತ್ತಿರುವ ಸುಬೇದಾರ್ ಚೋಪ್ರಾ ಸಾಧನೆಯನ್ನು ಇಡೀ ದೇಶವೇ ಮೆಚ್ಚಿದೆ.
ಮಹೀಂದ್ರಾ ಕಂಪನಿಯ ಚೇರ್ ಮನ್ ಆನಂದ್ ಮಹೀಂದ್ರಾ ಎಕ್ಸ್ಯುವಿ700 ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ, ನಮ್ಮ ಚಿನ್ನದ ಅಥ್ಲೆಟ್ ಗೆ ಎಕ್ಸ್ಯುವಿ700 ಉಡುಗೊರೆಯಾಗಿ ನೀಡುವುದು ನಮ್ಮ ಸೌಭಾಗ್ಯ ಮತ್ತು ಗೌರವ ಎಂದಿದ್ದು, ಒಂದು ಕಾರನ್ನು ಸಿದ್ಧವಾಗಿಡಲು ಸಂಬಂಧಪಟ್ಟವರಿಗೆ ಆದೇಶಿಸಿದ್ದಾರೆ.
ಇನ್ನೂ, ಹರಿಯಾಣ ಸರ್ಕಾರ ಕೂಡ ತಾವೇನೂ ಕಮ್ಮಿ ಇಲ್ಲ ಎನ್ನುವಂತೆ 6 ಕೋಟಿ ರೂ. ಮೊತ್ತದ ಬಹುಮಾನ ಘೋಷಣೆ ಮಾಡಿದೆ.