ಯಾರೋ ಕುಡುಕ___ಮಕ್ಕಳು ಹೇಳ್ತಾರೆ : ಕೈ ನಾಯಕರ ವಿರುದ್ಧ ಸಚಿವ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ | ಜನತಾ ನ್ಯೂಸ್
ಬೆಂಗಳೂರು : ಕಾಂಗ್ರೆಸ್ನವರನ್ನು ಟೀಕಿಸುವ ಭರದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ನಂತರ ತಮ್ಮ ತಪ್ಪಿನ ಅರಿವಾದಾಗ ಪದವನ್ನು ಹಿಂಪಡೆದ ಘಟನೆ ನಗರದಲ್ಲಿ ಇಂದು ನಡೆಯಿತು.
ವಿಧಾನಸೌಧದಲ್ಲಿ ಈಶ್ವರಪ್ಪನವರು ಮಾಧ್ಯಮಗಳ ಜೊತೆ ಮಾತನಾಡುವಾಗ, ಈಶ್ವರಪ್ಪನವರು ಹೆಸರು ಬದಲಾಯಿಸಿಕೊಳ್ಳಲಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕರಗೆ ತಿರುಗೇಟು ನೀಡುವ ಭರದಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ.. ಯಾರೋ ಕುಡುಕ-------- ಮಕ್ಕಳು ಹೇಳ್ತಾರೆ ಎಂದು ಅವಾಚ್ಯ ಶಬ್ಧ ಬಳಸಿದ್ದಾರೆ. ಬಳಿಕ ತಮ್ಮ ತಪ್ಪಿನ ಅರಿವಾಗಿ ಆ ಪದ ಹಿಂಪಡೆದಿದ್ದಾರೆ. ಅಲ್ಲದೆ, ಆ ಪದ ಹಠಾತ್ ಆಗಿ ಬಂದಿದೆ. ಅದನ್ನು ವಿವಾದಾತ್ಮಕವಾಗಿ ಮಾಡಬೇಡಿ ಎಂದು ಮನವಿ ಮಾಡಿದರು.
RELATED TOPICS:
English summary :Eshwarappa