ಕುಲ್ಗಾಂ ಎನ್ಕೌಂಟರ್ : ಬಿಎಸ್ಎಫ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ 2 ಉಗ್ರರು ತಟಸ್ಥ | ಜನತಾ ನ್ಯೂಸ್
ಶ್ರೀನಗರ : ಜಮ್ಮು ಕಾಶ್ಮೀರದ ಕುಲ್ಗಾಂ ನಲ್ಲಿ ನಿನ್ನೆ ಗಡಿ ಭದ್ರತಾ ಪಡೆ(ಬಿಎಸ್ಎಫ್) ಬೆಂಗಾವಲು ಪಡೆಯ ಮೇಲೆ ನಡೆದ ಉಗ್ರರ ದಾಳಿಗೆ ಪ್ರತ್ಯುತ್ತರ ಎನ್ಕೌಂಟರ್ ನಡೆದಿದ್ದು ಎರಡೂ ಭಯೋತ್ಪಾದಕರನ್ನು ಹೊಡೆದುರುಳಿಸಿ ತಟಸ್ಥಗೊಳಿಸಲಾಗಿದೆ.
ಕುಲಗಮ್ ಎನ್ಕೌಂಟರ್ ಕುರಿತು ಐಜಿಪಿ ಕಾಶ್ಮೀರ ವಿಜಯ್ ಕುಮಾರ್ ಮಾತನಾಡಿದ್ದು, ಬಿಎಸ್ಎಫ್(ಬಾರ್ಡರ್ ಸೆಕ್ಯೂರಿಟಿ ಫೋರ್ಸ್) ಬೆಂಗಾವಲು ಪಡೆ ಸಮೀಪಿಸುತ್ತಿರುವಾಗ ಇಬ್ಬರು ಭಯೋತ್ಪಾದಕರು ಕಟ್ಟಡದಿಂದ ಗುಂಡು ಹಾರಿಸಿದರು. ನಮ್ಮಲ್ಲಿ ಯಾರಿಗೂ ಗಾಯವಾಗಿಲ್ಲ. ಭದ್ರತಾ ಪಡೆಗಳು ಅವರನ್ನು ಸುತ್ತುವರಿದವು, ಈ ಸಂದರ್ಭದಲ್ಲಿ ಎನ್ಕೌಂಟರ್ ನಡೆಯಿತು. ನಾವು ರಾಕೆಟ್ ಲಾಂಚರ್ಗಳನ್ನು ಬಳಸಿದ್ದೇವೆ, ರಾತ್ರಿಯಾ ವೇಳೆಗೆ ಉಗ್ರರನ್ನು ತಟಸ್ಥಗೊಳಿಸಲಾಯಿತು, ಎಂದು ಹೇಳಿದ್ದಾರೆ.
ಕುಲ್ಗಾಂ ಎನ್ಕೌಂಟರ್ ನಲ್ಲಿ ಬಹಳ ಸಮಯದ ನಂತರ, ವಿದೇಶಿ ಭಯೋತ್ಪಾದಕರು RPG ಗ್ರೆನೇಡ್ ಬಳಸಿದರು. ಎಕೆ47 ರೈಫಲ್ ಜೊತೆಗೆ, ರಾಕೆಟ್ ಲಾಂಚರ್ ಮತ್ತು ಗ್ರೆನೇಡ್ಗಳನ್ನು(ಸೆಲ್ಗಳು) ವಶಪಡಿಸಿಕೊಳ್ಳಲಾಗಿದೆ. ಒಂದು ಪ್ರಮುಖ ದುರ್ಘಟನೆಯನ್ನು ತಪ್ಪಿಸಲಾಗಿದೆ. ಸಿಆರ್ಪಿಎಫ್, ಭೂಸೇನೆ ಮತ್ತು ಪೊಲೀಸರಿಗೆ ಅಭಿನಂದನೆಗಳು, ಎಂದು ಐಜಿಪಿ ವಿಜಯ್ ಕುಮಾರ್ ಎಏನ್ಐಗೆ ಹೇಳಿದ್ದಾರೆ.
ಕುಲ್ಗಾಂ ಎನ್ಕೌಂಟರ್ ನಲ್ಲಿ, ಉಸ್ಮಾನ್, ಎಂಬ ಪಾಕಿಸ್ತಾನ ಮೂಲದ ಭಯೋತ್ಪಾದಕ ಮತ್ತು ಉನ್ನತ ಜೆಇಎಂ ಕಮಾಂಡರ್ ಲಂಬೂ ನಿಕಟ ಸಹವರ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇತ್ತೀಚೆಗೆ, ಭಾರತೀಯ ಪಡೆ ನಡೆಸಿದ ಎನ್ಕೌಂಟರ್ ನಲ್ಲಿ ಲಂಬೂ ನನ್ನು ತಟಸ್ಥಗೊಳಿಸಲಾಗಿತ್ತು. ಬಿಎಸ್ಎಫ್ ಬೆಂಗಾವಲು ದಾಳಿಯ ಮೇಲೆ ಪಾಕಿಸ್ತಾನದ ಕೈವಾಡವನ್ನು ಇದು ದೃಡಪಡಿಸುತ್ತದೆ, ಎಂದು ವಿಜಯ ಕುಮಾರ್ ಸ್ಪಷ್ಟಪಡಿಸಿದ್ದಾರೆ.