ಬಿಜೆಪಿ ಸರಕಾರದ ನಾಯಕರೆಲ್ಲರೂ ಸಾಮೂಹಿಕ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ! | ಜನತಾ ನ್ಯೂಸ್
ಬೆಂಗಳೂರು : ರಾಜ್ಯ ಬಿಜೆಪಿ ಸರಕಾರದ ನಾಯಕರೆಲ್ಲರೂ ಸಾಮೂಹಿಕ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಭ್ರಷ್ಟಾಚಾರವನ್ನು ಬಿಜೆಪಿಯ ಎಲ್ಲರೂ ಸಮರ್ಥನೆ ಮಾಡಿಕೊಳ್ಳುತ್ತಾರೆ, ಬಿಜೆಪಿಯಲ್ಲಿರುವವರೆಲ್ಲಾ ಸೇರಿ ಭ್ರಷ್ಟಾಚಾರವನ್ನು ಹಂಚಿಕೊಂಡು ಇರುತ್ತಾರೆ ಅಂತ ಶಶಿಕಲಾ ಜೊಲ್ಲೆಯನ್ನ ಸರ್ಕಾರ ಸಮರ್ಥನೆ ಮಾಡಿದ ವಿಚಾರದ ಬಗ್ಗೆ ಜಿಲ್ಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ವಿರುದ್ದದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದ ಸತೀಶ್ ಜಾರಕಿಹೊಳಿ, ಜೊಲ್ಲೆ ಭ್ರಷ್ಟಾಚಾರ ಮಾಡಿದ್ದರೂ ಅವರನ್ನು ಮತ್ತೆ ಸಚಿವೆಯನ್ನಾಗಿ ಮಾಡಿರುವುದು ಬಿಜೆಪಿಯ ಭ್ರಷ್ಟಾಚಾರಕ್ಕೆ ಉದಾಹರಣೆ ಎಂದು ಹೇಳಿದರು.
ಈ ಭಾರಿ ಜೊಲ್ಲೆ ಅವರಿಗೆ ದೇವರ ಖಾತೆ ನೀಡಿದ್ದಾರೆ. ಸದ್ಯ ಅವರು ದೇವರ ಜಪ ತಪ ಮಾಡಲಿ. ಎಲ್ಲ ಗುಡಿಗಳಿಗೆ ಒಳ್ಳೆಯದನ್ನು ಮಾಡಲಿ ಎಂದು ಈ ಖಾತೆ ನೀಡಿದ್ದಾರೆ. ತತ್ತಿ ತಿಂದ ಜಿಲ್ಲೆ ಈಗ ರಾಯರ ಜಪ ಮಾಡುತ್ತಿದ್ದಾರೆ. ಎಗ್ ಖಾತೆ ಸಾಕು ಮುಂದೆ ಏನಾದ್ರೂ ಅನಾಹುತ ಮಾಡಬಾರದು ಅಂತ ಸಿಎಂ ಮುಜರಾಯಿ ಖಾತೆ ನೀಡಿ ಒಳ್ಳೆ ಕೆಲಸ ಮಾಡಿದ್ದಾರೆ. ಗುರುವಾರ ಬಂತಮ್ಮಾ.. ರಾಯರ ನೆನೆಯಮ್ಮ ಅಂತ ಶಶಿಕಲಾ ಜೊಲ್ಲೆಗೆ ಪಾಪ ಮಾಡಿದೀಯಾ. ರಾಯರ ನೆನೆಯಮ್ಮ ಅಂತ ಗುಡಿಗಳಿಗೆ ಅನುದಾನ ಕೊಡಿ, ಸ್ವಚ್ಚಗೊಳಿಸಿ ಅಂತ ಖಾತೆ ಕೊಟ್ಟಿದ್ದಾರೆ ಎಂದು ಜಾರಕಿಹೊಳಿ ಹೇಳಿದರು.