ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ, ಬಳಿಕ ಚಿನ್ನ-ಹಣ ಕದ್ದು ವರ ಪರಾರಿ! | ಜನತಾ ನ್ಯೂಸ್
ಬೆಂಗಳೂರು : ಚಿತ್ರನಟಿಯೊಬ್ಬಳಿಗೆ ರೌಡಿಯೊಬ್ಬನ ಅಣ್ಣ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ್ದಲ್ಲದೆ, ಬಳಿಕ ಚಿನ್ನಾಭರಣ ಹಾಗೂ ಹಣದೊಂದಿಗೆ ಪರಾರಿಯಾಗಿ, ನಾನು ರೌಡಿಯ ಅಣ್ಣ ಎಂದು ಧಮಕಿ ಹಾಕಿ ಬೆದರಿಸಿದ ಪ್ರಕರಣವೊಂದು ನಡೆದಿದೆ.
ಬೆಂಗಳೂರಿನ ರಾಜಗೋಪಾಲನಗರದ ಯುವತಿ ವಂಚನೆಗೆ ಒಳಗಾದವರು. ಇವರು ಕನ್ನಡ ಚಿತ್ರರಂಗದಲ್ಲಿ ಸಹ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ರೌಡಿಶೀಟರ್ ಕುಣಿಗಲ್ ಗಿರಿ ಅಣ್ಣ ಹರೀಶ್ ವಂಚನೆ ಮಾಡಿದ ವ್ಯಕ್ತಿ.
ಈತ ಸ್ಯಾಂಡಲ್ವುಡ್ನಲ್ಲಿ ಸಹಕಲಾವಿದೆ ಆಗಿರುವ, ರಾಜಗೋಪಾಲನಗರದ ನಿವಾಸಿ ಯುವತಿಯ ಹಿಂದೆ ಬಿದ್ದಿದ್ದು, ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಆಕೆಯನ್ನು ಮದುವೆಯಾಗಿ ಬಲೆಗೆ ಬೀಳಿಸಿಕೊಂಡಿದ್ದ ಈತ ಮನೆಯಲ್ಲೇ ತಾಳಿಯನ್ನೂ ಕಟ್ಟಿ ಮದುವೆಯಾದಂತೆ ಹರೀಶ್ ನಟಿಸಿದ್ದಾರೆ. ನಂತರ ಅವರ ಬಳಿ ಇದ್ದ ಹಣ ಹಾಗೂ ಚಿನ್ನ ಲೂಟಿ ಮಾಡಿ ಪರಾರಿಯಾಗಿದ್ದಾರೆ.
ನಂತರ ಯುವತಿಯ ಬಳಿಯಿದ್ದ 180 ಗ್ರಾಂ ಚಿನ್ನಾಭರಣ, 2.5 ಲಕ್ಷ ರೂಪಾಯಿ ನಗದು ಪಡೆದು ಹರೀಶ್ ಎಸ್ಕೇಪ್ ಆಗಿದ್ದಾರೆ.
ಈ ಘಟನೆ ಬಳಿ ಹರೀಶ್ ಸಂಪರ್ಕಿಸಿದರೆ ಯುವತಿಗೆ ಅವರು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಯುವತಿ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆಗ ಆತ ಕರೆ ಮಾಡಿ, ನನ್ನ ತಮ್ಮ ಕುಣಿಗಲ್ ಗಿರಿ ರೌಡಿ, ದೂರು ವಾಪಸ್ ಪಡೆದರೆ ಸರಿ, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಹೀಗಾಗಿ ಯುವತಿ ಹರೀಶ್ ಮಾತ್ರವಲ್ಲದೆ ಗಿರಿ ವಿರುದ್ಧವೂ ದೂರು ನೀಡಿದ್ದು, ಕ್ರಮಕೈಗೊಳ್ಳುವಂತೆ ಕೋರಿಕೊಂಡಿದ್ದಾಳೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.