ಕ್ವಾರಿಯೊಂದಕ್ಕೆ ಸ್ಫೋಟಕ ಸಾಗಿಸುತ್ತಿದ್ದ ಕಾರು ಸ್ಫೋಟ; ವ್ಯಕ್ತಿ ಸಜೀವ ದಹನ | ಜನತಾ ನ್ಯೂಸ್
ಕನಕಪುರ : ಕಾರೊಂದರಲ್ಲಿ ಸ್ಫೋಟ ಸಂಭವಿಸಿ ಅದು ಛಿದ್ರಗೊಂಡು ಹೊತ್ತಿ ಉರಿದಿದ್ದಲ್ಲದೆ, ಅದರಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಕರಕಲಾಗಿ ಮೃತಪಟ್ಟಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳೆ ಗವಿಮಠದ ಬಳಿ ಈ ಅನಾಹುತ ಸಂಭವಿಸಿದೆ.
ಕನಕಪುರ ನಿವಾಸಿ ಮಹೇಶ್ (48) ಮೃತರು. ಇವರು ಕನಕಪುರದಿಂದ ಮಠದ ಸಮೀಪ ಇರುವ ಕಲ್ಲು ಗಣಿಗಾರಿಕೆ ಕ್ವಾರಿಯೊಂದಕ್ಕೆ ಕಾರಿನಲ್ಲಿ ಸ್ಫೋಟಕ ಸಾಮಗ್ರಿ ತುಂಬಿಕೊಂಡು ಹೊರಟಿದ್ದರು ಎನ್ನಲಾಗಿದೆ. ಈ ಸಂದರ್ಭ ಏಕಾಏಕಿ ಸ್ಫೋಟ ಸಂಭವಿಸಿದ್ದು, ಕಾರು ಸಂಪೂರ್ಣ ಛಿದ್ರವಾಗಿದೆ.
ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
RELATED TOPICS:
English summary :Kanakapura