ಎಚ್ಎಎಲ್ ಭೇಟಿ ನೀಡಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು | ಜನತಾ ನ್ಯೂಸ್
ಬೆಂಗಳೂರು : ಕರ್ನಾಟಕ ರಾಜ್ಯ ಪ್ರವಾಸದಲ್ಲಿರುವ ದೇಶದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಇಂದು ರಾಜಧಾನಿಯಲ್ಲಿನ ಹಿಂದೂಸ್ತಾನ್ ಏರೋನಾಟಿಕ್ಸ ಲಿಮಿಟೆಡ್(ಎಚ್ಎಎಲ್)ಗೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ, ದೇಶದ ಹಾಗೂ ಎಚ್ಎಎಲ್ ನ ಹೆಮ್ಮೆಯ ಸ್ವದೇಶಿ ಯುದ್ಧ ವಿಮಾನಗಳಾದ ಎಲ್ಸಿಎ ತೇಜಸ್ ಮತ್ತು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್(ಎಲ್ಸಿಎಚ್)ಗಳ ಸೌಲಭ್ಯಗಳಿಗೆ ಭೇಟಿ ಮಾಡಿ, ತೇಜಸ್ ಹಾಗೂ ಎಲ್ಸಿಎಚ್ ಗಳ ಕುರಿತು ಮಾಹಿತಿ ಪಡೆದಿದ್ದಾರೆ.
ರಾಜ್ಯದ ನೂತನ ರಾಜ್ಯಪಾಲರಾದ ತಾವರ್ಚಂದ್ ಗೆಹ್ಲೋಟ್ ಅವರು ಉಪರಾಷ್ಟ್ರಪತಿಯವರ ಎಚ್.ಎ.ಎಲ್ ಗೆ ಭೇಟಿ ಸಂದರ್ಭದಲ್ಲಿ ಜೊತೆ ಇದ್ದರು.
RELATED TOPICS:
English summary :VP M Venkaiah Naidu visits HAL facilities of LCA & LCH