ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ : ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ | ಜನತಾ ನ್ಯೂಸ್
ಲಕ್ನೋ : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಶನಿವಾರ ರಾತ್ರಿ ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(SGPGI) ನಿಧನರಾದರು, ಅವರಿಗೆ 89 ವರ್ಷ ವಯಸ್ಸು ಆಗಿತ್ತು.
ಕಲ್ಯಾಣ್ ಸಿಂಗ್ ಸಾರ್ವಜನಿಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ನಡೆಸಿದ್ದರು, ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ಭಾನುವಾರ ಬಿಜೆಪಿ ಹಿರಿಯ ನಾಯಕನಿಗೆ ಅವರ ನಿವಾಸದಲ್ಲಿ ಅಂತಿಮ ನಮನ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಒಬ್ಬ ಅಮೂಲ್ಯ ವ್ಯಕ್ತಿತ್ವ ಮತ್ತು ಒಬ್ಬ ಸಮರ್ಥ ನಾಯಕ, ಅವರು ಸಾಮಾನ್ಯ ಜನರಿಗೆ "ನಂಬಿಕೆಯ ಸಂಕೇತ" ಆಗಿದ್ದರು, ಎಂದು ಹೇಳಿದ್ದಾರೆ.
"ದೇಶವು ಒಂದು ಅಮೂಲ್ಯವಾದ ವ್ಯಕ್ತಿತ್ವವನ್ನು ಮತ್ತು ಒಬ್ಬ ಸಮರ್ಥ ನಾಯಕನನ್ನು ಕಳೆದುಕೊಂಡಿದೆ. ಅವನಿಂದಾದ ಶೂನ್ಯವನ್ನು ಪೂರೈಸಲು, ನಾವು ಅವರ ಆದರ್ಶಗಳು, ಭರವಸೆಗಳಿಗಾಗಿ ಮತ್ತು ಅವರ ಕನಸುಗಳನ್ನು ಸಾಧಿಸಲು ಗರಿಷ್ಠ ಶ್ರಮವಹಿಸಬೇಕು ಎಲ್ಲಾ ಪ್ರಯತ್ನವನ್ನು ಮಾಡಬೇಕು", ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
"ಇದು ನಮ್ಮೆಲ್ಲರಿಗೂ ದುಃಖದ ಕ್ಷಣ. ಅವರ (ಕಲ್ಯಾಣ್ ಸಿಂಗ್) ಪೋಷಕರು ಅವರಿಗೆ "ಕಲ್ಯಾಣ್ ಸಿಂಗ್" ಎಂದು ಹೆಸರಿಟ್ಟರು. ಆವರು ತನ್ನ ಹೆತ್ತವರು ನೀಡಿದ ಹೆಸರನ್ನು ಈಡೇರಿಸುವ ರೀತಿಯಲ್ಲಿ ಬದುಕಿದರು. ಅವರು ತಮ್ಮ ಇಡೀ ಜೀವನವನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಕಳೆದರು. ಅವರು "ಜನ ಕಲ್ಯಾಣ"ವನ್ನು ತಮ್ಮ ಜೀವನದ ಮಂತ್ರವಾಗಿಸಿಕೊಂಡರು ಮತ್ತು ಬಿಜೆಪಿ, ಭಾರತೀಯ ಜನ ಸಂಘದ ಕುಟುಂಬಕ್ಕಾಗಿ, ಸಿದ್ಧಾಂತಕ್ಕಾಗಿ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಪ್ರಧಾನಿ ಮೋದಿ ಹೇಳಿದರು.
ಕಲ್ಯಾಣ್ ಸಿಂಗ್ ಅವರನ್ನು "ಬದ್ಧ ನಿರ್ಧಾರ ತೆಗೆದುಕೊಳ್ಳುವವರು" ಎಂದು ಅವರು ಶ್ಲಾಘಿಸಿದ ಪ್ರಧಾನಿ ಮೋದಿ, ಅವರು ದೇಶದಾದ್ಯಂತ "ವಿಶ್ವಾಸದ ಹೆಸರು" ಆಗಿದ್ದರು ಎಂದಿದ್ದಾರೆ.