ಪಿಹೆಚ್ಡಿ ವ್ಯಾಸಂಗ ಈಗ ಬೇಡಮ್ಮ ಎಂದಿದ್ದಕ್ಕೆ ಮನನೊಂದ ಆತ್ಮಹತ್ಯೆ..! | ಜನತಾ ನ್ಯೂಸ್
ಬಳ್ಳಾರಿ : ಪಿಹೆಚ್ಡಿ ಮಾಡೋದು ಬೇಡ ಅಂತ ಪೋಷಕರು ಹೇಳಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ನಡೆದಿದೆ.
24 ವರ್ಷದ ಯು.ಪೂಜಾ ಮೃತ ದುರ್ದೈವಿ. ಪಿಎಚ್ಡಿ ಮಾಡುತ್ತೇನೆ ಎಂದು ಮನೆಯಲ್ಲಿ ಪೂಜಾ ಹೇಳಿದ್ದಕ್ಕೆ ತಂದೆ ನಾಗರಾಜ್, ಈಗ ಹಣವಿಲ್ಲ. ಪಿಎಚ್ಡಿ ಓದು ಸದ್ಯಕ್ಕೆ ಬೇಡ ಎಂದಿದ್ದಾರೆ. ಆದರೂ ನಾನು ಓದಲೇಬೇಕೆಂದು ಹಠ ಮಾಡಿದ್ದು, ತಂದೆ ಒಪ್ಪಿಗೆ ಸೂಚಿಸಿರಲಿಲ್ಲ. ಇಷ್ಟಕ್ಕೆ ಮನನೊಂದ ಪೂಜಾ, ಕೋಣೆಯ ಬಾಗಿಲು ಹಾಕಿಕೊಂಡು ನೇಣಿಗೆ ಕೊರಳೊಡ್ಡಿದ್ದಾಳೆ.
ಸಾಕಷ್ಟು ಸಮಯ ರೂಂನಿಂದ ಹೊರಗಡೆ ಬಂದಿಲ್ಲ. ಬಳಿಕ ಬಾಗಿಲು ಒಡೆದು ನೋಡಿದಾಗ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.