ಕೊರೋನಾ 3 ಅಲೆಯು ಬರುತ್ತಿಲ್ಲ, ಆದರೆ ಅದು ಈಗಾಗಲೇ ಬಂದಿದೆ - ಮುಂಬೈ ಮೇಯರ್ | ಜನತಾ ನ್ಯೂಸ್
ಮುಂಬೈ : ಭಾರತದಲ್ಲಿ ಕೋವಿಡ್-19 ಮೂರನೇ ಅಲೆಯ ಆತಂಕದ ನಡುವೆ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಅವರು, "ಕೋವಿಡ್-19 ಮೂರನೇ ಅಲೆಯು ಬರುತ್ತಿದೆ ಎಂಬುದು ಇಲ್ಲ, ಆದರೆ ಅದು ಈಗಾಗಲೇ ಬಂದಿದೆ," ಎಂದು ಹೇಳಿದರು.
ಕಳೆದ ಪೂರ್ತಿ ತಿಂಗಳು ವರದಿಯಾದ ಕೋವಿಡ್-19 ಪ್ರಕರಣಗಳಿಗೆ ಹೋಲಿಸಿದಲ್ಲಿ, ಸೆಪ್ಟೆಂಬರ್ನ ಮೊದಲ ಆರು ದಿನಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ ಬೆನ್ನಲ್ಲೇ ಕೋವಿಡ್-19 ಮೂರನೇ ಅಲೆಯ ಕುರಿತಾದ ಕಿಶೋರಿ ಪೆಡ್ನೇಕರ್ ಅವರ ಹೇಳಿಕೆ ನಗರದ ಜನರಲ್ಲಿ ಆತಂಕ ಹೆಚ್ಚಿಸಿದಂತಾಗಿದೆ.
ಇಂದು ಮಂಗಳವಾರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, "ಈಗ ಗಣಪತಿ ಬಪ್ಪ ಬರಲಿದ್ದಾರೆ. ಈಗಾಗಲೇ ಸಾರಲಾಗಿದೆ "ಮೇರಾ ಘರ್, ಮೇರಾ ಬಪ್ಪ"(ನನ್ನ ಮನೆ, ನನ್ನ ಗಣಪತಿ ಬಪ್ಪ). ನಾನು ನನ್ನ ಬಪ್ಪನ ಬಿಟ್ಟು ಎಲ್ಲೂ ಹೋಗುವುದಿಲ್ಲ. ಏಕೆಂದರೆ, ಮೂರನೇ ಅಲೆಯು ಬರುತ್ತಿದೆ ಎಂಬುದು ಇಲ್ಲ, ಆದರೆ ಅದು ಈಗಾಗಲೇ ಬಂದಿದೆ, ಎಂದು ಮುಂಬೈ ಮೇಯರ್ ಮಾದ್ಯಮಗಳಿಗೆ ತಿಳಿಸಿದ್ದಾರೆ. ಅದೇರೀತಿ ಗಣಪತಿ ಮಂಡಲದ ಜನರೂ ಶಿಫ್ಟ್ ಮಾದರಿಯಲ್ಲಿ ಯಾರ್ಯ ನಿರ್ವಹಿಸಲಿದ್ದಾರೆ, ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 10ರಂದು "ಗಣೇಶ ಚತುರ್ಥಿ"ಯೊಂದಿಗೆ ಆರಂಭವಾಗುವ ಸಾಲು ಸಾಲು ಹಬ್ಬಗಳ ಮುನ್ನಾದಿನಗಳಲ್ಲಿ ದಾಖಲಾಗಿರುವ ಪ್ರಕರಣಗಳ ಹೆಚ್ಚಳವು, ಬೃಹನ್-ಮುಂಬೈ ಮುನ್ಸಿಪಲ್ ಕಾರ್ಪೊರೇಶನ್(ಬಿಎಂಸಿ) ಅಧಿಕಾರಿಗಳ ಕಾರ್ಯ ದಕ್ಷತೆಗೆ ಸವಾಲಾಗಿ ಪರಿಣಮಿಸಿದೆ.
ಹೆಚ್ಚುವರಿ ಮುನ್ಸಿಪಲ್ ಆಯುಕ್ತ ಸುರೇಶ್ ಕಕಾನಿ ಸೋಮವಾರ ಹೇಳಿಕೆ ನೀಡಿ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬಿಎಂಸಿ ಕರೋನವೈರಸ್ ಪರೀಕ್ಷೆಯನ್ನು ಹೆಚ್ಚಿಸಲು ನಿರ್ಧರಿಸಿದೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ಜನರಿಗೆ ದಂಡ ವಿಧಿಸಲು ಹೆಚ್ಚು ಸ್ವಚ್ಛಗೊಳಿಸುವ ಮಾರ್ಷಲ್ಗಳನ್ನು ನೇಮಿಸಿಕೊಳ್ಳಲು ಮತ್ತು ಜಂಬೋ ಕೋವಿಡ್ -19 ಕೇಂದ್ರಗಳನ್ನು ಸಿದ್ಧವಾಗಿಡಲು ನಿರ್ಧರಿಸಿದೆ, ಎಂದು ತಿಳಿಸಿದ್ದಾರೆ ಎನ್ನಲಾಗಿದೆ.