ಲಖಿಂಪುರ್ ಖೇರಿ ಪ್ರಕರಣ : ತನಿಖೆಗಾಗಿ ಲಖಿಂಪುರ್ ಖೇರಿಯಲ್ಲಿ ಏಕ ಸದಸ್ಯತ್ವದ ತನಿಖಾ ಆಯೋಗದ ರಚನೆ | ಜನತಾ ನ್ಯೂಸ್
ಲಕ್ನೋ : ರಾಷ್ಟ್ರಾದ್ಯಂತ ಚರ್ಚೆಯಲ್ಲಿರುವ ಅಕ್ಟೋಬರ್ 3ರಂದು ಲಖಿಂಪುರ್ ಖೇರಿಯಲ್ಲಿ ನಡೆದ ದುರ್ಘಟನೆಯಲ್ಲಿ 8 ಜನರ ಸಾವಿನ ತನಿಖೆಗಾಗಿ ಲಖಿಂಪುರ್ ಖೇರಿಯ ಕೇಂದ್ರ ಕಚೇರಿಯೊಂದಿಗೆ ಏಕ ಸದಸ್ಯತ್ವದ ತನಿಖಾ ಆಯೋಗವನ್ನು ರಚಿಸಲಾಗಿದೆ.
ಪ್ರಕರಣದ ಕುರಿತು ಕೇಂದ್ರ ಸಚಿವ ಕೌಶಲ್ ಕಿಶೋರ್ ಬಾಧಿತ ಕುಟುಂಬಗಳಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ, ಸರ್ಕಾರವು ಪ್ರಕರಣದ ತನಿಖೆಗೆ ಆದೇಶಿಸಿದೆ. ಸಂತ್ರಸ್ತ ಕುಟುಂಬಗಳು ಸರ್ಕಾರದಿಂದ ತಮಗೆ ನೀಡಲಾದ ಆರ್ಥಿಕ ಸಹಾಯವನ್ನು ಒಪ್ಪಿಕೊಂಡಿವೆ, ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ರಾಹುಲ್ ಗಾಂಧಿಗೆ ತಾವು ಏನು ಹೇಳುತ್ತಿದ್ದಾರೋ ಏನು ಇಲ್ಲವೋ ಗೊತ್ತಿಲ್ಲ. ಆ ಜನರು(ಸಂತ್ರಸ್ತ) ಇದನ್ನು ಒಪ್ಪಿದಾಗ, ನ್ಯಾಯದ ಅಗತ್ಯವಿದೆ ಎಂದು ಅವರು(ರಾಹುಲ್) ಹೇಳುವ ಹಾಗೆ ಹೇಳುವುದರಲ್ಲಿ ಅರ್ಥವೇನು. ಆ ಜನರಿಗೆ(ಸಂತ್ರಸ್ತ) ನ್ಯಾಯ ಸಿಗುತ್ತದೆ, ಸರ್ಕಾರ ತನಿಖೆ ನಡೆಸುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು", ಎಂದು ಎಏನ್ಐಗೆ ಹೇಳಿದ್ದಾರೆ.
ಇದಕ್ಕೂ ಮೊದಲು ಮಾದ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಡ್ರಾ, "ಪ್ರಜಾಪ್ರಭುತ್ವದಲ್ಲಿ ನ್ಯಾಯವು ಒಂದು ಹಕ್ಕು. ನಾನು ನ್ಯಾಯಕ್ಕಾಗಿ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ನಾನು ನಿನ್ನೆ ಭೇಟಿಯಾದ ಎಲ್ಲ ಪೀಡಿತ ಕುಟುಂಬಗಳು ನ್ಯಾಯಕ್ಕಾಗಿ ಮಾತ್ರ ಬೇಡಿಕೆ ಇಟ್ಟವು. ಪಕ್ಷಪಾತವಿಲ್ಲದ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು", ಎಂದು ಒತ್ತಾಯಿಸಿದ್ದಾರೆ.
ಭಾನುವಾರ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ರೈತರು ಮಹಾರಾಜ ಅಗ್ರಾಸೇನ್ ಇಂಟರ್ ಕಾಲೇಜಿನ ಕ್ರೀಡಾ ಮೈದಾನದಲ್ಲಿ ಜಮಾಯಿಸಿದ್ದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಅವರು ಯೋಜಿಸಿದ್ದರು.
ರೈತರು ತಮ್ಮ ಪ್ರತಿಭಟನೆಗೆ ಮುಂದಾದಾಗ, ಆಶಿಶ್ ಮಿಶ್ರಾ ಅವರ ಒಡೆತನದ ಕಾರು ಅವರನ್ನು ಅತಿವೇಗವಾಗಿ ಚಲಾಯಿಸಿ, ನಾಲ್ವರು ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ, ಲಖಿಂಪುರ್ ಖೇರಿಯಲ್ಲಿ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದು, ವಾಹನದಲ್ಲಿ ಬಂದಿದ್ದ ಇನ್ನೂ ನಾಲ್ಕು ಜನರ ಸಾವುಗಳಿಗೆ ಕಾರಣವಾಯಿತು.