ಕುಡಿವ ನೀರಿನ ಟ್ಯಾಂಕಿನಲ್ಲಿ ಮಹಿಳೆಯ ಶವ ಪತ್ತೆ! | ಜನತಾ ನ್ಯೂಸ್
ರಾಮನಗರ : ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ 9, 10, 11 ನೇ ವಾರ್ಡ್ ನ ಸರಿಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಕೂಡ ಕೊಳೆತ ಶವದ ನೀರನ್ನೇ ಕುಡಿದ್ದಿದ್ದಾರೆ. ಒಂದು ವಾರಗಳ ಕಾಲ ನೀರು ಹಳದಿ ಬಣ್ಣಕ್ಕೆ ತಿರುಗಿದೆ, ಕೆಟ್ಟ ವಾಸನೆ ಬಂದಿದೆ. ಈ ವಿಚಾರವಾಗಿ ಸ್ಥಳೀಯರು ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಗೆ ದೂರು ನೀಡಿದ್ದಾರೆ.
ನಂತರ ಪರಿಶೀಲನೆ ಮಾಡಿದಾಗ ಕೆಳಭಾಗದಲ್ಲಿ ಇರೋ ಓವರ್ ಹೆಡ್ ಟ್ಯಾಂಕ್ ನ ವಾಲ್ ನಲ್ಲಿ ಮಹಿಳೆಯ ಕಾಲು ಪತ್ತೆಯಾಗಿದೆ. ಮೃತದೇಹದ ಉಳಿದ ಭಾಗಕ್ಕಾಗಿ ಹುಡುಕಾಟ ಮುಂದುವರಿದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ನ್ಯಾಯಾಲಯ ಹಿಂಭಾಗವಿರುವ ಓವರ್ಹೆಡ್ ಟ್ಯಾಂಕ್ ನೀರಿನ ಪೈಪ್ನಲ್ಲಿ ಕೊಳೆತ ಸ್ಥಿತಿಯಲ್ಲಿ ತೊಡೆಭಾಗದಿಂದ ಪಾದದವರೆಗೂ ಕಾಲು ಪತ್ತೆಯಾಗಿದೆ.
ಮಾರುತಿ ಬಡಾವಣೆ, ಕೋಟೆ, ಹಾಗೂ ಕುವೆಂಪು ನಗರಕ್ಕೆ ಕಾವೇರಿ ನೀರು ಪೂರೈಸುವ ಟ್ಯಾಂಕ್ ಇದಾಗಿದ್ದು, ಇದರ ವಾಲ್ವ್ನಲ್ಲಿ ಶನಿವಾರ ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಮನುಷ್ಯನ ಕಾಲು ಪತ್ತೆಯಾಗಿತ್ತು. ಟ್ಯಾಂಕ್ನ ಮೇಲ್ಭಾಗದಲ್ಲಿ ಮಹಿಳೆಯ ಬಟ್ಟೆ, ಚಪ್ಪಲಿ ಹಾಗೂ ಛತ್ರಿಯೊಂದು ಸಿಕ್ಕಿದ್ದು, ಕೆಲದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿತ್ತು.
ಆದರೆ ವಾಲ್ವ್ ಓಪನ್ ಮಾಡಿ ನೋಡಿದಾಗ ತೊಡೆಭಾಗದವರೆಗೂ ಒಂದು ಕಾಲು ಮಾತ್ರ ಸಿಕ್ಕಿದ್ದು, ಬೆಳಲ್ಲಿ ಕಾಲುಂಗರ ಕೂಡ ಇದೆ. ಮತ್ತೊಂದು ಕಾಲು, ಸೇರಿ ದೇಹದ ಉಳಿದ ಭಾಗ ಇನ್ನು ಪತ್ತೆಯಾಗಿಲ್ಲ. ಯಾರೋ ಮಹಿಳೆಯನ್ನ ಕೊಲೆ ಮಾಡಿ ದೇಹ ತುಂಡರಿಸಿ ನೀರಿನ ಟ್ಯಾಂಕ್ಗೆ ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇದರ ಜೊತೆಗೆ ಚೂಡಿದಾರ ಡ್ರೆಸ್, ಚಪ್ಪಲಿ, ಛತ್ರಿ ಸಹ ಪತ್ತೆಯಾಗಿದೆ. ಈ ವಿಚಾರ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಕೊಲೆಯಾದ ಮಹಿಳೆಯ ಶವ ಎಂಬ ಅನುಮಾನ ಒಂದೆಡೆಯಾದರೆ, ಪ್ರಕರಣದ ದಿಕ್ಕು ತಪ್ಪಿಸಲು ಬೇರೆಡೆ ಕೊಲೆ ಮಾಡಿ ಕಾಲನ್ನ ತಂದು ಬಿಸಾಡಿರುವ ಶಂಕೆಯೂ ಇದೆ. ಅಥವಾ ಕಾಲು ಸಿಕ್ಕಿ ದೇಹ ಮತ್ತೊಂದೆಡೆ ಹೋಗಿರಬಹುದೆಂದು ಶಂಕೆಯೂ ಸಹ ವ್ಯಕ್ತವಾಗ್ತಿದೆ.
ಟ್ಯಾಂಕ್ನಿಂದ ಸರಬರಾಜಾಗುವ ನೀರಿನಲ್ಲಿ ವಾಸನೆ ಬರುತ್ತಿದೆ ಎಂದು ಸಂಬಂಧಪಟ್ಟವರ ಗಮನಕ್ಕೆ ತಂದರೂ ಗಮನಹರಿಸಲಿಲ್ಲ. ನೀರಿಗೆ ಮೃತದೇಹ ಬಿದ್ದು ಹಲವು ದಿನಗಳು ಕಳೆದಿದ್ದು, ನೂರಾರು ಮನೆಗಳಿಗೆ ನೀರು ಸರಬರಾಜಾಗಿದೆ. ಅಲ್ಲದೆ ಟ್ಯಾಂಕ್ನ ಮೇಲ್ಭಾಗಕ್ಕೆ ಬೀಗ ಹಾಕದೇ ಬೇಜವಾಬ್ದಾರಿತನ ತೋರಲಾಗಿದೆ. ಈ ಘಟನೆಗೆ ಕಾವೇರಿ ನೀರು ಸರಬರಾಜು ಮಂಡಳಿ ಹಾಗೂ ನಗರಸಭೆಯೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ನೀರನ್ನ ಬಳಕೆ ಮಾಡಿರುವ ಕೆಲವರಲ್ಲಿ ಆರೋಗ್ಯ ವ್ಯತ್ಯಾಸವಾಗಿದ್ದು ಕೆಮ್ಮು, ಜ್ವರ ಕಾಣಿಸಿಕೊಂಡಿದೆ ಎಂಬ ಮಾಹಿತಿ ಇದೇ.