ನಿರ್ಮಾಣದ ಹಂತದ ಸಂಪ್ ಗೆ ಬಿದ್ದು 14 ವರ್ಷದ ಬಾಲಕ ಸಾವು | ಜನತಾ ನ್ಯೂಸ್
ಬೆಂಗಳೂರು : ನಿರ್ಮಾಣದ ಹಂತದ ಕಟ್ಟಡ ಸಂಪ್ ಗೆ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಹೆಚ್ ಬಿಆರ್ ಲೇಔಟ್ ನಡೆದಿದೆ.
ಚಂದ್ರ (14) ಮೃತ ಬಾಲಕ. ಈ ಬಡಾವಣೆಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿನ ಸಂಪ್ನೊಳಗೆ ಮಳೆನೀರು ತುಂಬಿಕೊಂಡಿದ್ದು, ಮಗುವೊಂದು ಅದರಲ್ಲಿ ಬಿದ್ದು ಸಾವಿಗೀಡಾಗಿದೆ. ಜೊತೆಗಿದ್ದ ಇನ್ನೊಂದು ಮಗು ನಾಪತ್ತೆಯಾಗಿದ್ದು, ಹುಡುಕಾಟ ಇನ್ನೂ ಮುಂದುವರಿದಿದೆ.
ಕಟ್ಟಡದ ಮುಂದೆ ಆಟದ ಮೈದಾನದಲ್ಲಿ ಆಡುತ್ತಿದ್ದ ವೇಳೆ ಚೆಂಡು ಕಟ್ಟಡದ ಒಳಗೆ ಹೋಗಿತ್ತು. ಚೆಂಡು ತರಲು ಹೋಗಿದ್ದ ಇಬ್ಬರು ಮಕ್ಕಳಲ್ಲಿ ಆಯತಪ್ಪಿ ಚಂದ್ರ ಸಂಪ್ ನೊಳಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸಂಪ್ನೊಳಗಿದ್ದ ಮಗುವಿನ ಶವ ಹೊರಕ್ಕೆ ತೆಗೆದಿದ್ದಾರೆ. ಆದರೆ ಇನ್ನೊಂದು ಮಗುವಿನ ಸುಳಿವು ಇನ್ನೂ ಸಿಗದ ಕಾರಣ ಹುಡುಕಾಟ ನಡೆಸುತ್ತಿದ್ದಾರೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.