ಪುನೀತ್ ಮುಂದಿನ ವರ್ಷ ಆರಾಧನೆಯಲ್ಲಿ ಪಾಲ್ಗೋಳ್ಳುತ್ತೇನೆ ಎಂದಾಗ ವೀಣೆ ಜಾರಿಕೊಂಡಿದ್ದು..... | ಜನತಾ ನ್ಯೂಸ್
ಬೆಂಗಳೂರು : ಪುನೀತ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದಿದ್ದ ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ.
ಮಾರ್ಚ್ನಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿದ್ದರು. ಅಪ್ಪು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯುವ ವೇಳೆ ತೊಟ್ಟಿಲು ಮತ್ತು ವೀಣೆ ಅಲುಗಾಡಿತ್ತು. ಈ ವಿಡಿಯೋ ಪುನೀತ್ ರಾಜ್ಕುಮಾರ್ ಸಾವಿನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕರು ಇದು ಅಪ್ಪು ಸಾವಿನ ಮುನ್ಸೂಚನೆ ಎಂದು ಭಾವಿಸಿ ವದಂತಿ ಹಬ್ಬಿಸಿದ್ದಾರೆ.
ಪುನೀತ್ ರಾಜಕುಮಾರ್ ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಾವು ಮುಂದಿನ ಬಾರಿ ರಾಯರ ಆರಾಧನೆಗೆ ಬರುತ್ತೇನೆ ಎಂದು ಮಾತನಾಡುತ್ತಿರುವಾಗಲೇ ಸಿಂಹಾಸನದ ಮೇಲಿದ್ದ ರಾಯರ ಉತ್ಸವ ಮೂರ್ತಿ ಹಾಗೂ ಬೆಳ್ಳಿ ವೀಣೆ ಜಾರಿಕೊಂಡಿತ್ತು. ಇದು ಪುನೀತ್ ಸಾವಿನ ಮುನ್ಸೂಚನೆಯಾಗಿತ್ತೇ? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.
ಆದರೆ ಈ ಊಹಾಪೋಹಗಳಿಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಸ್ಪಷ್ಟನೆ ನೀಡಿದ್ದಾರೆ. ಅವರ ಸಾವಿಗೂ ವೀಣೆ ಜಾರಿದ್ದಕ್ಕೂ ಸಂಬಂಧವಿಲ್ಲ. ಇದು ಆಕಸ್ಮಿಕ ಘಟನೆ ಎಂದು ಹೇಳಿದ್ದಾರೆ.