ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಎನ್ಸಿಪಿ ಮುಖಂಡ ಅನಿಲ್ ದೇಶಮುಖ್ ಇಡಿ ಕಸ್ಟಡಿಗೆ | ಜನತಾ ನ್ಯೂಸ್
ಮುಂಬೈ : ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪಿಎಂಎಲ್ಎ ನ್ಯಾಯಾಲಯವು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಹಾಗೂ ಎನ್ಸಿಪಿ ಮುಖಂಡ ಅನಿಲ್ ದೇಶಮುಖ್ ಅವರನ್ನು ನವೆಂಬರ್ 6 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಿದೆ
ಮುಂಬೈನ ವಿಶೇಷ ಪಿಎಂಎಲ್ಎ ನ್ಯಾಯಾಲಯವು ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಅವರ ಕಸ್ಟಡಿಯಲ್ಲಿ ಮನೆ ಆಹಾರ ಮತ್ತು ಔಷಧಿಗಳ ಅರ್ಜಿಯನ್ನು ಇಡಿಗೆ ಅನುಮತಿಸಿದೆ. ಏಜೆನ್ಸಿಯ ವಿಚಾರಣೆಯ ಸಂದರ್ಭದಲ್ಲಿ ಅವರ ವಕೀಲರ ಉಪಸ್ಥಿತಿಯನ್ನು ನ್ಯಾಯಾಲಯವು ಅನುಮತಿಸಿದೆ
ಅನಿಲ್ ದೇಶ್ಮುಖ್ ಮತ್ತು ಅವರ ಕುಟುಂಬ ಸದಸ್ಯರು ಬಾರ್ ಮತ್ತು ಆರ್ಕೆಸ್ಟ್ರಾ ಮಾಲೀಕರಿಂದ ಸಂಗ್ರಹಿಸಲಾದ 4.7 ಕೋಟಿ ರೂಪಾಯಿ ಮೌಲ್ಯದ ಲಂಚದ ಹಣವನ್ನು ಲಾಂಡರಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ, ಎಂದು ಆರೋಪಿಸಿ ಜಾರಿ ನಿರ್ದೇಶನಾಲಯವು ಮುಂಬೈನ ವಿಶೇಷ ಪಿಎಂಎಲ್ಎ ನ್ಯಾಯಾಲಯದ ಮುಂದೆ ತನ್ನ ರಿಮಾಂಡ್ ಅರ್ಜಿಯಲ್ಲಿ ತಿಳಿಸಿದೆ.
ಮುಂಬೈ ನ ಕ್ರೈಂ ತನಿಖಾ ವಿಭಾಗದ ಮುಖ್ಯಸ್ಥ ಸಚಿನ್ ವಾಜೆ ಸೇರಿದಂತೆ ಪ್ರತಿ ತಿಂಗಳು ರೂ.100 ಕೋಟಿ ಲಂಚ ಸಂಗ್ರಹಿಸುವ ಮಾಸ್ಟರ್ ಪ್ಲಾನ್ ಹಗರಣಕ್ಕೆ ಸಂಬಂಧಪಟ್ಟ ಹಾಗೆ ಪ್ರಕರಣ ಆರಂಭಗೊಂಡಿತ್ತು.