ಕೇದಾರನಾಥದಲ್ಲಿ ಅನಾವರಣಗೊಂಡ ಆದಿ ಶಂಕರಾಚಾರ್ಯರ ಪ್ರತಿಮೆಗೂ ಕನ್ನಡಕ್ಕಿರುವ ನಂಟು | ಜನತಾ ನ್ಯೂಸ್
ಕೇದಾರನಾಥ್ : ಉತ್ತರಾಖಂಡದ ಕೇದಾರನಾಥದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಕೇದಾರನಾಥದಲ್ಲಿ ಪ್ರತಿಷ್ಟಾಪಿಸಲಾದ ಈ ಅತಿವಿಶಿಷ್ಟವಾದ ವಿಗ್ರಹವನ್ನು ನಮ್ಮ ರಾಜ್ಯ ಕರ್ನಾಟಕದ ಶಿಲ್ಪಿಗಳು ಕೆತ್ತಿದ್ದು, ನಮ್ಮ ನೆಲದ ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿರುವುದು ವಿಶೇಷವಾಗಿದೆ.
ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಈ ಕುರಿತು ಮಾತನಾಡಿದ್ದು, "ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿಸಿದ್ದು ನನಗೆ ಒಂದು ಸೌಭಾಗ್ಯ. ಪ್ರಧಾನಿ ಮೋದಿಯವರು ಈ ಪ್ರತಿಮೆಯನ್ನು ಭಾರತದ ಜನತೆಗೆ ಅರ್ಪಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಪ್ರತಿನಿತ್ಯ 14-15 ಗಂಟೆಗಳ ಕಾಲ 9 ತಿಂಗಳ ಕಾಲ ಈ ಶಿಲ್ಪವನ್ನು ನಿರ್ವಿುಸಿದ್ದೇವೆ", ಎಂದು ಎಏನ್ಐಗೆ ತಿಳಿಸಿದ್ದಾರೆ.
ಆದಿ ಶಂಕರಾಚಾರ್ಯರ ಈ ವಿಗ್ರಹವನ್ನು ಸಿದ್ಧಪಡಿಸುವ ಕಾರ್ಯವು ಸೆಪ್ಟೆಂಬರ್ 2020 ರಲ್ಲಿ ಪ್ರಾರಂಭವಾಯಿತು. ಸುಮಾರು 9 ಕುಶಲಕರ್ಮಿಗಳು ಕಷ್ಟಪಟ್ಟು ಆದಿ ಗುರು ಶಂಕರಾಚಾರ್ಯರ ಈ ರೂಪವನ್ನು ಸಿದ್ಧಪಡಿಸಿದರು. ಸೆಪ್ಟೆಂಬರ್ ನಲ್ಲಿ ಚಿನೂಕ್ ಹೆಲಿಕಾಪ್ಟರ್ ಸಹಾಯದಿಂದ ಮೂರ್ತಿ ಅವರನ್ನು ಉತ್ತರಾಖಂಡಕ್ಕೆ ಕರೆತರಲಾಗಿದೆ ಎನ್ನಲಾಗಿದೆ. ಕಲಾವಿದರ ತಂಡವು ಈ ಪ್ರತಿಮೆಗೆ ವಿಶೇಷವಾದ ಬಂಡೆಯನ್ನು ಆಯ್ಕೆ ಮಾಡಿದೆ. ವಿಶೇಷವೆಂದರೆ 130 ತೂಕದ ಬಂಡೆಯನ್ನು ಕೆತ್ತಿದ ನಂತರ ಅದರ ತೂಕ 35 ಟನ್ ಆಗಿದೆ.