ಆಟೋ ಚಾಲಕನ ವಿವಸ್ತ್ರಗೊಳಿಸಿ ಆತನ ಮೇಲೆ ಮೂತ್ರ ವಿಸರ್ಜಿಸಿ ಹಲ್ಲೆಗೈದಿದ್ದ ವೈದ್ಯ ಅರೆಸ್ಟ್ | ಜನತಾ ನ್ಯೂಸ್
ಬೆಂಗಳೂರು : ಚಾಲಕನನ್ನು ವಿವಸ್ತ್ರಗೊಳಿಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಹಲ್ಲೆಗೈದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದು, ವೈದ್ಯನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ನಿವಾಸಿ 26 ವರ್ಷದ ಆಟೊ ಚಾಲಕ ಮುರಳಿ ಹಲ್ಲೆಗೊಳಗಾಗಿದ್ದು, ಖಾಸಗಿ ಆಸ್ಪತ್ರೆ ವೈದ್ಯ ರಾಕೇಶ್ ಶೆಟ್ಟಿಯನ್ನು ಬಂಧಿಸಲಾಗಿದೆ.
ನವೆಂಬರ್ 4ರಂದು ರಾತ್ರಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಆಟೋ ಚಾಲಕ ಮತ್ತು ವೈದ್ಯ ರಾಕೇಶ್ ಇಬ್ಬರಿಗೂ ಮೊದಲಿನಿಂದಲೂ ಪರಿಚಯವಿದ್ದ ಹಿನ್ನೆಲೆ ಜೊತೆಯಾಗಿ ಮದ್ಯ ಸೇವನೆ ಮಾಡಿದೆ. ಮದ್ಯದ ನಶೆಯಲ್ಲಿ ಈ ಗಲಾಟೆ ನಡೆದಿದೆ ಎಂದು ಆಟೋ ಚಾಲಕ ಹೇಳಿಕೊಂಡಿದ್ದಾನೆ.
ನವೆಂಬರ್ 4ರಂದು ಕ್ಲಿನಿಕ್ ಗೆ ರಾಕೇಶ್ ನನ್ನನ್ನು ಕರೆದು, ಪಟಾಕಿ ತರುವಂತೆ ಹೇಳಿದರು. ಪಟಾಕಿ ನೀಡಿದ ನಂತರ ಬಿರಿಯಾನಿ ಮತ್ತು ಫ್ರೈ ಮಾಡಿಸಿದ್ದೇನೆ. ಅದೆಲ್ಲವನ್ನು ಕಂಟ್ರಿ ಕ್ಲಬ್ ಗೆ ತಂದು ಕೊಡುವಂತೆ ಹೇಳಿದರು. ಈ ವೇಳೆ ಮತ್ತೊಬ್ಬ ವೈದ್ಯ ಡ್ರಾಪ್ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಈ ವೇಳೆ ಜಗಳ ವಿಕೋಪಕ್ಕೆ ಹೋಗಿದ್ದು, ವೈದ್ಯರ ಗುಂಪು ಚಾಲಕ ಕುಡಿದಿದ್ದಿಯಾ ಅಂತ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದೂ ಅಲ್ಲದೇ ಶೌಚಾಲಯಜಕ್ಕೆ ಕರೆದೊಯ್ದು ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಮೃಗೀಯವಾಗಿ ನಡೆದುಕೊಂಡಿದ್ದಾರೆ.
ಹಲ್ಲೆ ಸಂಬಂಧ ಚಾಲಕ ನೀಡಿದ ದೂರಿನ ಮೇರೆಗೆ ರಾಕೇಶ್ ಶೆಟ್ಟಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.