ಕ್ರಿಪ್ಟೋಕರೆನ್ಸಿ : ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಮತ್ತು ಬಿಜೆಪಿ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ಪಕ್ಷ - ಸಚಿವ ಸುಧಾಕರ್ | ಜನತಾ ನ್ಯೂಸ್
ಬೆಂಗಳೂರು : ಕಾಂಗ್ರೆಸ್ ಒಂದು ಭ್ರಷ್ಟಾಚಾರದ ಪಕ್ಷ ಹಾಗೂ ಬಿಜೆಪಿ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ಪಕ್ಷ ಆಗಿದೆ, ಎಂದು ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿ ಕುರಿತಾಗಿ ಕಾಂಗ್ರೆಸ್ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ರಣದಿಪ್ ಸುರ್ಜೆವಾಲ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್ ಅವರು, "ಕಾಂಗ್ರೆಸ್ ಒಂದು ಭ್ರಷ್ಟಾಚಾರದ ಪಕ್ಷ ಆಗಿದೆ. ಹಾಗೂ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭ್ರಷ್ಟಾಚಾರ ವನ್ನು ಬಯಲಿಗೆಳೆಯುವ ಪಕ್ಷ ಆಗಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ, ಯಾರು ಅಂದು ಗೃಹಮಂತ್ರಿಯಾಗಿದ್ದ ಸಂದರ್ಭದಲ್ಲಿ ಡ್ರಗ್ಸ್ ದಂಧೆ ಗಳ ವಿರುದ್ಧ ತನಿಖೆಗೆ ಆದೇಶ ನೀಡಿದ್ದರು. ಡ್ರಗ್ಸ್ ಪರ್ಲರ್ ಡ್ರಗ್ಸ್ ಬಳಕೆದಾರರ ವಿರುದ್ಧ ಅಂದು ಆರಂಭವಾದ ಅತಿ ತೀಕ್ಷವಾದ ಕಾರ್ಯಾಚರಣೆಗಳ ಸಂದರ್ಭದಲ್ಲಿ ಡ್ರಗ್ಸ್ ಬಳಕೆದಾರ ಶ್ರೀಕರ್ ಬಂಧನಕ್ಕೊಳಗಾಗಿದ್ದನು. ತನಿಖೆ ಸಂದರ್ಭದಲ್ಲಿ ಪೊಲೀಸರಿಗೆ ಈತನು ಕೇವಲ ಡ್ರಗ್ಸ್ ಚಟ ಗಳಷ್ಟೇ ಅಲ್ಲದೇ, ಅವನು ಒಬ್ಬ ಹವ್ಯಾಸಿ ಹ್ಯಾಕರ್, ಎಂದು ತಿಳಿದುಬಂದಿದೆ. ಅವನು ತಾನು ಕ್ರಿಪ್ಟೋಕರೆನ್ಸಿ ಗಳನ್ನು ಸಹ ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ, ಎಂದಿದ್ದಾರೆ. ಅಲ್ಲದೇ, ಹೆಸರೇ ಹೇಳುವ ಹಾಗೆ ಕ್ರಿಪ್ಟೋ ಕರೆನ್ಸಿಯನ್ನು ಹ್ಯಾಕ್ ಮಾಡೋದು ಅಷ್ಟು ಸುಲಭಸಾಧ್ಯವಲ್ಲ. ಅದನ್ನು ತುಂಬಾ ಗಟ್ಟಿಯಾದ ಸಿಸ್ಟಮ್ ನಲ್ಲಿ ನಿರ್ಮಿಸಲಾಗಿದೆ ಇರುವುದು ನಮಗೆಲ್ಲ ತಿಳಿದಿದೆ. ಆದ್ದರಿಂದ ಕ್ರಿಪ್ಟೋಕರೆನ್ಸಿ ಅನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಆದರೂ ಆತನೇ ಖುದ್ದು ಬಹಿರಂಗಪಡಿಸಿರುವ ಹಾಗೆ ಪ್ರಕರಣದ ಕುರಿತು ನಮ್ಮ ಬಿಜೆಪಿ ಸರ್ಕಾರ ಪ್ರತಿಯೊಂದು ಮಾಹಿತಿ ತನಿಖೆ ನಡೆಸಲು ಮುಂದಾಗಿದೆ. ಮತ್ತು ಈ ಎಲ್ಲ ಮಾಹಿತಿಗಳ ಮೇಲೆ ಪೊಲೀಸರು ಚಾರ್ಜ್ ಶೀಟ್ ಅನ್ನು ಫೈಲ್ ಮಾಡಿದೆ. ಇಂದು ರಂದೀಪ್ ಸುರ್ಜೇವಾಲ ಅದೇ ಚಾರ್ಜ್ ಶೀಟ್ ಆಧಾರದ ಮೇಲೆ ಆರೋಪ ಮಾಡಿದ್ದಾರೆ.
ಈ ಚಾರ್ಜ್ಶೀಟ್ ಅನ್ನು ನಮ್ಮ ಪೊಲೀಸರೇ ಸಿದ್ಧಪಡಿಸಿದ್ದು ಬಸವರಾಜ್ ಬೊಮ್ಮಾಯಿ ಅವರ ಆದೇಶದ ಮೇರೆಗೆ ತನಿಖೆ ನಡೆಸಲಾಗಿದೆ. ನಾವು ಹಗರಣಗಳನ್ನು ಬಯಲಿಗೆ ಎಳೆಯಲು ಪ್ರಯತ್ನಿಸುತ್ತಿದ್ದೇವೆ. ಹಗರಣವನ್ನು ಬಯಲಿಗೆ ತಂದಿದ್ದಕ್ಕೆ, ನೀವು ಈ ಸರ್ಕಾರವನ್ನು ಪ್ರಶಂಸಿಸಬೇಕು, ಎಂದು ಸುಧಾಕರ್ ಹೇಳಿದ್ದಾರೆ.
ಹಾಗೆಯೇ, ನಮ್ಮ ಸರ್ಕಾರ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಯಾವುದೇ ಮುಚ್ಚುಮರೆ ಮಾಡುತ್ತಿಲ್ಲ ಮತ್ತು ಎಲ್ಲ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಈ ಪ್ರಕರಣದ ತನಿಖಾ ತಂಡ ಶ್ರೀಕರ ಪ್ರಕರಣದ ಎಲ್ಲ ಮಾಹಿತಿಯನ್ನು ಇಂಟರ್ಪೋಲ್, ಇಡಿ ಮತ್ತು ಸಿಬಿಐಎಂ ನೊಂದಿಗೆ ಹಂಚಿಕೊಂಡಿದೆ, ಎಂದು ಸಚಿವ ಕೆ.ಸುಧಾಕರ್ ಎಏನ್ಐಗ್ಗೆ ಮಾಹಿತಿ ನೀಡಿದ್ದಾರೆ.