ಸಿದ್ದರಾಮಯ್ಯ ಖಾಲಿ ಬುಟ್ಟಿ ಇಟ್ಟುಕೊಂಡು ಹಾವು ಬಿಡಲು ಹೊರಟಿದ್ದಾರೆ | ಜನತಾ ನ್ಯೂಸ್
ಬೆಂಗಳೂರು : ಹಾವು ಬಿಡುತ್ತೇವೆ, ಹಾವು ಬಿಡುತ್ತೇವೆ ಅಂತ ಖಾಲಿ ಬುಟ್ಟಿ ಇಟ್ಟುಕೊಂಡು ಸೌಂಡ್ ಮಾಡುತ್ತಿದ್ದಾರೆ. ಇವರ ಹಣೆಬರಹವೇ ಇಷ್ಟು ಎಂದು ಟೀಕಿಸಿದರು.
ವಿಧಾನಸೌಧದಲ್ಲಿ ಸೋಮಣ್ಣ, ಗೋಪಾಲಯ್ಯ ಶಾಸಕ ಪ್ರೀತಂ ಗೌಡ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್, ಮುಂದಿನ ಚುನಾವಣೆ ಎದುರಿಸಲು ಸೃಷ್ಟಿ ಮಾಡಿಕೊಂಡಿರುವ ವಿಚಾರವೇ ಬಿಟ್ ಕಾಯಿನ್. ನಿತ್ಯ ಏನು ಸುಳ್ಳು ಹೇಳಬೇಕು ಎಂಬುದು ಕಾಂಗ್ರೆಸ್ ಚಿಂತೆಯಾಗಿದೆ. ಹಾವು ಬಿಡುತ್ತೇವೆ, ಹಾವು ಬಿಡುತ್ತೇವೆ ಅಂತ ಖಾಲಿ ಬುಟ್ಟಿ ಇಟ್ಟುಕೊಂಡು ಸೌಂಡ್ ಮಾಡುತ್ತಿದ್ದಾರೆ. ಇವರ ಹಣೆಬರಹವೇ ಇಷ್ಟು ಎಂದು ಟೀಕಿಸಿದರು.
ಕಾಂಗ್ರೆಸ್ನವರು ಸುಳ್ಳಿನ ಸರದಾರರು. ಮುಂದಿನ ಚುನಾವಣೆಗಾಗಿ ಬಿಟ್ ಕಾಯಿನ್ ಇಟ್ಟುಕೊಂಡಿದ್ದಾರೆ. ಬಿಟ್ ಕಾಯಿನ್ ಇಟ್ಟುಕೊಂಡು ಸುಳ್ಳು ಹೇಳಲು ಹೊರಟಿದ್ದಾರೆ.
ಕಾಂಗ್ರೆಸ್ನವರಿಗೆ ಬೆಳಗ್ಗೆ ಎದ್ದಾಗ ಬೀಳುವ ಕನಸು, ಇವತ್ತು ಏನು ಹೇಳಲಿ ಅನ್ನೋದು. ಮೋದಿ ವಿರುದ್ಧ ರಫೆಲ್ ಡೀಲ್ ಆರೋಪ ಮಾಡಿದರು. ನೋಡಿದರೆ ಕಾಂಗ್ರೆಸ್ನವರೇ ಎಷ್ಟು ಡೀಲ್ ಮಾಡಿದ್ದಾರೆ ಅನ್ನೋದು ಹೊರ ಬಂತು.
ಪ್ರಿಯಾಂಕ್ ಖರ್ಗೆ, ಡಿಕೆಶಿ ಎಲ್ಲರೂ ಪ್ರೆಸ್ ಮೀಟ್ ಮಾಡಿದರು. ಇಬ್ಬರ ಹೆಸರಿದೆ ಅಂತಾ ಹೇಳುವ ಸಿದ್ದರಾಮಯ್ಯ, ಖಾಲಿ ಬುಟ್ಟಿ ಇಟ್ಟುಕೊಂಡು ಕೆರೆ, ನಾಗರ, ಮಂಡಲ, ಹಸಿರು ಹಾವು ಬಿಡ್ತೀನಿ ಅಂತಾ ಹೇಳುತ್ತಿದ್ದಾರೆ.
ಹಾವಾಡಿಗ ಬುಟ್ಟಿ ಇಟ್ಟು ಕೊನೆಗೆ ಹಾವು ತೋರಿಸಿ ಕಾಸು ಕೇಳುತ್ತಾನೆ.ಆದರೆ, ಇವರು ಖಾಲಿ ಬುಟ್ಟಿ ಇಟ್ಟುಕೊಂಡು ಹಾವು ತೋರಿಸಲು ಹೊರಟಿದ್ದಾರೆ. ಮಾತೆತ್ತಿದರೆ ಬಾಂಬೆ ತೋರಿಸ್ತೀನಿ, ದಿಲ್ಲಿ ತೋರಿಸ್ತೀನಿ ಅಂತಾರೆ. ಆ ಇಬ್ಬರ ಹೆಸರು ದಯವಿಟ್ಟು ಹೇಳಿ ಎಂದು ಕಿಡಿ ಕಾರಿದರು.
ಜವಾಬ್ದಾರಿಯುತ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಇಬ್ಬರು ಹೆಸರು ಹೇಳಲಿ. ಹಾವು ಇಲ್ಲದ ಬುಟ್ಟಿ ಇಟ್ಟುಕೊಂಡು ನಗೆ ಪಾಟಲು ಆಗುವುದು ಬೇಡ ಎಂದು ಸವಾಲು ಹಾಕಿದರು. 2ಜಿ 3ಜಿ ಕಲ್ಲಿದ್ದಲು ಹೀಗೆ ಸಾವಿರಾರು ಕೋಟಿ ರೂ. ಹಗರಣ ಮಾಡಿದ್ದು ಕಾಂಗ್ರೆಸ್. ಇವತ್ತು ದೇಶ ನಡೆಸುತ್ತಿರುವುದು ದೇಶಭಕ್ತ ನರೇಂದ್ರ ಮೋದಿ ಸರ್ಕಾರ ಎಂಬುದು ನೆನಪಿರಲಿ ಎಂದು ತಿರುಗೇಟು ನೀಡಿದರು.