ಘರ್ ವಾಪಸಿ : ಹಿಂದೂ ಧರ್ಮ ಸ್ವಿಕರಿಸಿದ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ | ಜನತಾ ನ್ಯೂಸ್
ಲಕ್ನೋ : ಘರ್ ವಾಪಸಿ(ಮನೆಗೆ ಹಿಂತಿರುಗು) ಮಹತ್ತರ ಬೆಳವಣಿಗೆಯೊಂದರಲ್ಲಿ, ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಇಂದು ಘಾಜಿಯಾಬಾದ್ನಲ್ಲಿ ಸನಾತನ ಧರ್ಮದ ಸಂಪೂರ್ಣ ಆಚರಣೆಗಳೊಂದಿಗೆ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಮಾಹಿತಿಗಳ ಪ್ರಕಾರ ಅವರ ಹೊಸ ಹೆಸರು ಹರ್ಬೀರ್ ನಾರಾಯಣ ಸಿಂಗ್ ತ್ಯಾಗಿ ಎನ್ನಲಾಗಿದೆ.
ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ಮುಸ್ಲಿಂ ಧರ್ಮದ ವಿರುದ್ಧ ಧ್ವನಿ ಎತ್ತಿದ್ದ, ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಇಂದು ಇಸ್ಲಾಂ ಧರ್ಮವನ್ನು ತೊರೆದು ಔಪಚಾರಿಕವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ವರದಿಗಳ ಪ್ರಕಾರ, ಸೋಮವಾರ ದಾಸ್ನಾ ದೇವಸ್ಥಾನದ ಮಹಂತ್ ನರಸಿಂಹ ಆನಂದ ಸರಾವತಿ ಅವರು ರಿಜ್ವಿಯನ್ನು ಔಪಚಾರಿಕವಾಗಿ ಹಿಂದೂ ಧರ್ಮಕ್ಕೆ ಪರಿವರ್ತಿಸಿದ್ದಾರೆ.
ಕಳೆದ ತಿಂಗಳು ರಿಜ್ವಿ ಅವರು ವೀಡಿಯೋ ರೆಕಾರ್ಡ್ ಮಾಡಿರುವ ಸಂದೇಶವನ್ನು ಬಿಡುಗಡೆ ಮಾಡಿದ್ದು, ನನ್ನನ್ನು ಹಿಂದೂ ವಿಧಿ ವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಬೇಕೆ ಹೊರತು ಸಮಾಧಿ ಮಾಡಬಾರದು, ಎಂಬ ಆಶಯವನ್ನು ಅವರು ಈ ಹಿಂದೆ ವ್ಯಕ್ತಪಡಿಸಿದ್ದರು.
ವೀಡಿಯೊದಲ್ಲಿ ರಿಜ್ವಿ ಅವರು, ಪ್ರವಾದಿ ಮೊಹಮದ್ ಕುರಿತು ಬೆಳಕು ಚೆಲ್ಲುವ ಪುಸ್ತಕ ಬರೆದಕ್ಕಾಗಿ ತಮ್ಮ ಹತ್ಯೆಗೆ ಮುಸಲ್ಮಾನರು ಸಂಚು ರೂಪಿಸುತ್ತಿದ್ದಾರೆ. ನನ್ನ ತಲೆಗೆ ಬಹುಮಾನ ಇಡಲಾಗಿದೆ. ಅಷ್ಟೇ ಅಲ್ಲದೇ ಕಬರಸ್ತಾನ್ ದಲ್ಲಿ ನನಗೆ ಜಾಗ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅದ್ದರಿಂದ, ನಾನು ಸತ್ತ ಬಳಿಕ, ಯಾವುದೇ ಹಿಂಸೆಗೆ ಪ್ರಚೋಧನೆ ನೀಡದೇ ನನ್ನನ್ನು ಹಿಂದೂ ವಿಧಿ ವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಬೇಕೆ ಹೊರತು ಸಮಾಧಿ ಮಾಡಬಾರದು, ಎಂಬ ಆಶಯವನ್ನು ಅವರು ಈ ಹಿಂದೆ ವ್ಯಕ್ತಪಡಿಸಿದ್ದರು.
Update: He is now Harbir Narayan singh Tyagi pic.twitter.com/Xh1gP4ZnuQ
— MeghUpdates🚨™ (@MeghBulletin) December 6, 2021