ಕೇರಳ ರಾಜ್ಯದ ಕುಲಪತಿ ಸ್ಥಾನವನ್ನು ವೈಯಕ್ತಿಕವಾಗಿ ವಹಿಸಿಕೊಳ್ಳುವಂತೆ ಸಿಎಂ ವಿಜಯನ್ ಗೆ ರಾಜ್ಯಪಾಲರ ಪತ್ರ | ಜನತಾ ನ್ಯೂಸ್
ತಿರುವನಂತಪುರಮ್ : ವಿಶ್ವವಿದ್ಯಾನಿಲಯಗಳ ಕಾಯಿದೆಗಳನ್ನು ತಿದ್ದುಪಡಿ ಮಾಡಿಕೊಳ್ಳಿ ಮತ್ತು ನೀವು ವೈಯಕ್ತಿಕವಾಗಿ ಕುಲಪತಿ ಸ್ಥಾನವನ್ನು ವಹಿಸಿಕೊಳ್ಳುವುದು ನನ್ನ ಸಲಹೆಯಾಗಿದೆ, ಇದರಿಂದ ನೀವು ರಾಜ್ಯಪಾಲರ ಮೇಲೆ ಅವಲಂಬಿತರಾಗದೆ ನಿಮ್ಮ ರಾಜಕೀಯ ಉದ್ದೇಶಗಳನ್ನು ನಿರ್ವಹಿಸಬಹುದು, ಎಂದು ಕೇರಳ ರಾಜ್ಯಪಾಲ ಎ.ಎಮ್.ಖಾನ್ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ರಾಜಕೀಯ ನೇಮಕಾತಿಗಳ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯಪಾಲರು ಕೇರಳ ಸಿಎಂಗೆ ಪತ್ರ ಬರೆದಿದ್ದಾರೆ.
"ನಿಯಮಗಳು ಮತ್ತು ಕಾರ್ಯವಿಧಾನಗಳ ಸಂಪೂರ್ಣ ಉಲ್ಲಂಘನೆ" ಮಾಡುವಂತೆ ತನ್ನ ಮೇಲೆ ಒತ್ತಡ ತರಲಾಗುತ್ತಿದೆ ಎಂದು ಆರೋಪಿಸಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದು, ಕಾಯಿದೆ ತಿದ್ದುಪಡಿ ಮಾಡುವ ಮೂಲಕ ರಾಜ್ಯಪಾಲರನ್ನು ವಿಶ್ವವಿದ್ಯಾನಿಲಯಗಳ ಕುಲಪತಿ ಸ್ಥಾನದಿಂದ ಕೆಳಗಿಳಿಸುವಂತೆ ಬರೆದಿದ್ದಾರೆ ಮತ್ತು ವಿಜಯನ್ ಅವರೇ ಅಧಿಕಾರ ವಹಿಸಿಕೊಳ್ಳಬಹುದು, ಎಂದು ಹೇಳಿದ್ದಾರೆ.
ಇದೀಗ ಬಿಡುಗಡೆಯಾದ ಡಿಸೆಂಬರ್ 8ರಂದು ಕಠಿಣವಾದ ಪತ್ರದಲ್ಲಿ ಖಾನ್ ಅವರು ರಾಜ್ಯಪಾಲರನ್ನು ಅವಲಂಬಿಸದೆ ತಮ್ಮ ರಾಜಕೀಯ ಉದ್ದೇಶಗಳನ್ನು ಮುಂದುವರಿಸಬಹುದು, ಎಂದು ಹೇಳುವ ಮೂಲಕ ಸಂಬಂಧಿತ ಕಾಯಿದೆಗೆ ತಿದ್ದುಪಡಿ ಮಾಡುವಂತೆ ಸಿಎಂಗೆ ಕೇಳಿದ್ದಾರೆ. ವಿಶ್ವವಿದ್ಯಾನಿಲಯಗಳು ಸರ್ಕಾರದ ನೇರ ನಿಯಂತ್ರಣಕ್ಕೆ ಬಂದರೆ, ರಾಜಕೀಯ ಹಸ್ತಕ್ಷೇಪದ ಆರೋಪಗಳನ್ನು ಮಾಡಲು ಯಾರಿಗೂ ಅವಕಾಶವಿರುವುದಿಲ್ಲ, ಎಂದು ಅವರು ಹೇಳಿದರು.