ಉದ್ಯಮಿ ಪಿಯೂಷ್ ಜೈನ್ ಬಂಧನ : ಒಟ್ಟು 194.45 ರೂ ನಗದು, 23ಕೆಜಿ ಚಿನ್ನ, ಶ್ರೀಗಂಧದ ಎಣ್ಣೆ 600ಕೆಜಿ ವಶ | ಜನತಾ ನ್ಯೂಸ್
ಕಾನ್ಪುರ್ : ನಗರದ ಉದ್ಯಮಿ ಪಿಯುಶ್ ಜೈನ್ ಅವರಿಗೆ ಸಂಬಂಧಪಟ್ಟ ತೆರಿಗೆ ದಾಳಿಯಲ್ಲಿ ಕನೌಜ್ನಲ್ಲಿರುವ ಓಡೋಕೆಮ್ ಇಂಡಸ್ಟ್ರೀಸ್ನ ವಸತಿ/ಕಾರ್ಖಾನೆ ಆವರಣವನ್ನು ಶೋಧಿಸುವ ಕಾರ್ಯಾಚರಣೆಯನ್ನು ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್ಟಿ ಇಂಟೆಲಿಜೆನ್ಸ್(ಡಿಜಿಜಿಐ) ಅಧಿಕಾರಿಗಳು ಮುಂದುವರೆಸಿದ್ದಾರೆ. ಕನೌಜ್ನಲ್ಲಿ ನಡೆಸಿದ ಶೋಧದ ವೇಳೆ ಅಧಿಕಾರಿಗಳು ಇಂದು ಸುಮಾರು 17 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ, ಎಂದು ಡಿಜಿಜಿಐ ಹೇಳಿದೆ.
ಭೂಗತ ಶೇಖರಣೆಯಲ್ಲಿ ಬಚ್ಚಿಟ್ಟ 600 ಕೆ.ಜಿ.ಗೂ ಹೆಚ್ಚು ಶ್ರೀಗಂಧದ ಎಣ್ಣೆ ಸೇರಿದಂತೆ ಲೆಕ್ಕಕ್ಕೆ ಸಿಗದ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುವ ಬೃಹತ್ ಕಚ್ಚಾ ವಸ್ತುಗಳು ಸಿಕ್ಕಿವೆ, ಇದರ ಮಾರುಕಟ್ಟೆ ಮೌಲ್ಯ ಸುಮಾರು ರೂ.6 ಕೋಟಿ ಎಂದು ಡಿಜಿಜಿಐ ಹೇಳಿದೆ.
ಕನೌಜ್ನಲ್ಲಿರುವ ಓಡೋಕೆಮ್ ಇಂಡಸ್ಟ್ರೀಸ್ನ ವಸತಿ/ಕಾರ್ಖಾನೆ ಆವರಣದಲ್ಲಿ ದಾಳಿ ನಡೆಸಿದಾಗ ಸುಮಾರು 23 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನವು ವಿದೇಶಿ ಗುರುತುಗಳನ್ನು ಹೊಂದಿರುವುದರಿಂದ, ಅಗತ್ಯ ತನಿಖೆಗಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯವನ್ನು (ಡಿಆರ್ಐ) ನಿಯೋಜಿಸಲಾಗುತ್ತಿದೆ, ಎಂದು ಡಿಜಿಜಿಐ ಹೇಳಿದೆ.
ಡಿಜಿಜಿಐ ಪ್ರಕಾರ, ಕನ್ನೌಜ್ನಲ್ಲಿ ನಡೆಯುತ್ತಿರುವ ಶೋಧ ಕಾರ್ಯ ಸಂಜೆಯವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಒಟ್ಟು 194.45 ರೂ ನಗದು ವಶಪಡಿಸಿಕೊಳ್ಳಲಾಗಿದೆ.
ವಸತಿ ಆವರಣದಿಂದ ವಶಪಡಿಸಿಕೊಂಡ ನಗದು, ಜಿಎಸ್ಟಿ ಪಾವತಿಸದೆ ಸರಕುಗಳ ಮಾರಾಟಕ್ಕೆ ಸಂಬಂಧಿಸಿದೆ, ಎಂದು ಪೀಯೂಶ್ ಜೈನ್ ಒಪ್ಪಿಕೊಂಡಿದ್ದಾರೆ. ದಾಖಲೆಯಲ್ಲಿ ಲಭ್ಯವಿರುವ ಅಗಾಧ ಪುರಾವೆಗಳ ದೃಷ್ಟಿಯಿಂದ ಓಡೋಕೆಮ್ ಇಂಡಸ್ಟ್ರೀಸ್ನಿಂದ ಜಿಎಸ್ಟಿಯ ದೊಡ್ಡ ಪ್ರಮಾಣದ ವಂಚನೆಯನ್ನು ಸೂಚಿಸಿವೆ ಎಂದು ಡಿಜಿಜಿಐ ಹೇಳಿದೆ.
ಉದ್ಯಮಿ ಪಿಯೂಷ್ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಿ 194.45 ಕೋಟಿ ರೂಪಾಯಿ ನಗದು, 23 ಕೆಜಿ ಚಿನ್ನ, 600 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಂಡ ನಂತರ ಕಾನ್ಪುರ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.