ಕೊರಗಜ್ಜನ ಕಟ್ಟೆ ಕಾಣಿಕೆ ಹುಂಡಿಗೆ ಕಾಂಡೊಮ್ ಹಾಕುತ್ತಿದ್ದ ಆರೋಪಿಯ ಬಂಧನ | ಜನತಾ ನ್ಯೂಸ್
ಮಂಗಳೂರು : ಕೊರಗಜ್ಜನ ಗುಡಿ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಅಪಮಾನ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಹಾಗೂ ಕರಾವಳಿಯ ಇತರ ಭಾಗದ ದೈವಸ್ಥಾನ, ದೇವಸ್ಥಾನ, ಸಿಖ್ ಗುರುದ್ವಾರ, ಬಸದಿ, ದರ್ಗಾಗಳಿಗೆ ಕಾಂಡೊಮ್ ಹಾಕುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಂಗಳೂರಿನ ಕೋಟೆಕಾರು ನಿವಾಸಿ ದೇವದಾಸ್ ದೇಸಾಯಿ (62) ಎಂಬಾತನ ಬಂಧನವಾಗಿದೆ.
ಆರೋಪಿ ವೃದ್ಧನ ವಿಚಾರಣೆ ವೇಳೆ, ಈತ ಮಂಗಳೂರಿನ 18 ಕಡೆಯ ದೇವಸ್ಥಾನ, ದೈವಸ್ಥಾನಗಳಿಗೆ ಈ ರೀತಿಯಾಗಿ ಬಳಸಿದ ಕಾಂಡೋಮ್ ಹಾಕಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಭೂಮಿಗೆ ಅಂತ್ಯ ಬರುವ ನಂಬಿಕೆಯಿಂದ, ದೈವಸ್ಥಾನಗಳ ಹುಂಡಿಗೆ ಬೈಬಲ್ ವಾಕ್ಯ ಮತ್ತು ಬಳಸಿದ ಕಾಂಡೋಮ್ ಹಾಕಿ ಗಲಭೆಗೆ ಪ್ರಯತ್ನಿಸಿದ್ದರ ಬಗ್ಗೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಮೂಲತಃ ಹುಬ್ಬಳ್ಳಿಯ ಮೂಲದವನಾದ ದೇವದಾಸ್ ದೇಸಾಯಿ, ಕುಟುಂಬ ಕಲಹದಿಂದ ಕಳೆದ 22 ವರ್ಷಗಳಿಂದ ಮಂಗಳೂರಿನಲ್ಲಿ ಏಕಾಂಗಿಯಾಗಿ ವಾಸವಾಗಿದ್ದಾನೆ. ಹಲವು ವರ್ಷಗಳ ಕಾಲ ಆಟೋ ರಿಕ್ಷಾ, ಲಾರಿ, ಕಾರು ಚಾಲಕನಾಗಿ ಕೆಲಸ ಮಾಡಿದ್ದ ದೇವದಾಸ್ ದೇಸಾಯಿ, ಸದ್ಯ ಗುಜರಿ ಪೇಪರ್ ಬಾಕ್ಸ್ಗಳನ್ನು ಮಾರಿಕೊಂಡು ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದಾನೆ.
ಬಂಧಿತ ಆರೋಪಿಯಿಂದ ಚಿತ್ರವಿಚಿತ್ರ ಹೇಳಿಕೆ ಕೇಳಿಬಂದಿದೆ. ಭೂಮಿ ವಿನಾಶಕ್ಕೆ ಬಂದಿದೆ. ಎಲ್ಲರೂ ಅಂತ್ಯವಾಗುತ್ತಾರೆ. ಏಸು ಒಬ್ಬನೆ ಕಾಪಾಡಬೇಕು. ಇನ್ಯಾವುದೇ ಧರ್ಮದ ದೇವರು ಈ ಅಂತ್ಯವನ್ನು ಕಾಪಾಡಲು ಸಾದ್ಯವಿಲ್ಲ. ಏಸು ಒಬ್ಬನೇ ಶ್ರೇಷ್ಟ. ಇನ್ನೇಲ್ಲಾ ದೇವರುಗಳು ಅಪವಿತ್ರ ಎಂದು ಹೇಳಿಕೆ ನೀಡಿದ್ದಾನೆ. ಅದಕ್ಕಾಗಿ ನಾನು ಅಲ್ಲಿ ಅಪವಿತ್ರ ವಸ್ತುಗಳನ್ನು ಹಾಕುತ್ತಿದ್ದೆ. ಮನುಷ್ಯನಿಗೆ ಆಯಸ್ಸು ಇರೋದೆ 70 ವರ್ಷ. ಈಗ ಜೈಲಿಗೆ ಹೋಗುತ್ತಿರೋದಕ್ಕೆ ನನಗೆ ಪಶ್ಚತ್ತಾಪವಿಲ್ಲ. ಇನ್ನೊಂದಿಷ್ಟು ವರ್ಷ ಇಂತದ್ದೇ ಕೆಲಸ ಮಾಡುವ ಅವಕಾಶವಿತ್ತು ಎಂದು ಹೇಳಿದ್ದಾನೆ.